ಮಂಗಳೂರು[ಜೂ.14]: ಗುಡ್ಡ ಕುಸಿದು ಸ್ಥಗಿತಗೊಂಡಿದ್ದ ಮಂಗಳೂರು-ಬೆಂಗಳೂರು ನಡುವಿನ ರೈಲು ಸಂಚಾರ ಮಧ್ಯರಾತ್ರಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ.
ಮಹಾಮಳೆಗೆ ಸುಬ್ರಹ್ಮಣ್ಯ-ಸಿರಿಬಾಗಿಲು ಸಮೀಪ ಹಳಿಗೆ ಗುಡ್ಡ ಕುಸಿದು ರೈಲುಯಾನವನ್ನು ಸ್ಥಗಿತಗೊಳಿಸಲಾಗಿತ್ತು. ಸದ್ಯ ಮಣ್ಣು ತೆರೆವಾದ ಹಿನ್ನಲೆಯಲ್ಲಿ ಕಾರವಾರ-ಬೆಂಗಳೂರು ಮತ್ತು ಕಣ್ಣೂರು-ಬೆಂಗಳೂರು ರೈಲು ಸಂಚಾರ ರಾತ್ರಿ 9 ಗಂಟೆ ಹೊತ್ತಿಗೆ ಮಂಗಳೂರು ನಿಲ್ದಾಣದ ಮೂಲಕ ಸಾಗಲಿವೆ.