ತಮ್ಮ ಪಕ್ಷದ ಶಾಸಕನ ಕ್ಷೇತ್ರಕ್ಕೆ ಮಂಡ್ಯ ಮಾಜಿ MP ಟವೆಲ್: JDS ತೊರೆಯುವ ಸುಳಿವು ಕೊಟ್ರಾ?

Published : Sep 06, 2019, 07:54 PM IST
ತಮ್ಮ ಪಕ್ಷದ ಶಾಸಕನ ಕ್ಷೇತ್ರಕ್ಕೆ ಮಂಡ್ಯ ಮಾಜಿ MP ಟವೆಲ್:  JDS ತೊರೆಯುವ ಸುಳಿವು ಕೊಟ್ರಾ?

ಸಾರಾಂಶ

ನಾಗಮಂಗಲದಲ್ಲಿ ನನಗೆ ನನ್ನದೇ ಆದ ಮತ ಬ್ಯಾಂಕ್ ಇದೆ. ಇಲ್ಲಿಯವರೆವಿಗೂ ಮತ್ತೊಬ್ಬರ ಗೆಲುವಿಗೆ ಶ್ರಮಿಸಿದ್ದೇನೆ ಎಂದು ಹೇಳಿವ ಮೂಲಕ ಮಂಡ್ಯ ಮಾಜಿ ಸಂಸದ ಜೆಡಿಎಸ್ ಪಕ್ಷ ತೊರೆಯುವ ಸುಳಿವು ನೀಡಿದ್ದಾರೆ.

ಮಂಡ್ಯ, [ಸೆ.06]: ಮಂಡ್ಯದ ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ನ ಸುರೇಶ್ ಗೌಡ ಗೆಲುವು ಸಾಧಿಸಿದ್ದಾರೆ. ಆದ್ರೆ, ಇದೀಗ ಮಂಡ್ಯ ಮಾಜಿ ಜೆಡಿಎಸ್ ಸಂಸದ ಈಗಿನಿಂದಲೇ ನಾಗಮಂಡಲ ಕ್ಷೇತ್ರಕ್ಕೆ ಟವೆಲ್ ಹಾಕಿದ್ದಾರೆ.

ಇಂದು [ಶುಕ್ರವಾರ] ಮಂಡ್ಯದ ನಾಗಮಂಗಲದಲ್ಲಿ ಮಾತನಾಡಿದ ಮಂಡ್ಯ ಮಾಜಿ ಜೆಡಿಎಸ್ ಸಂಸದ ಎಲ್.ಆರ್.ಶಿವರಾಮೇಗೌಡ ,  ನಾಗಮಂಗಲದಲ್ಲಿ ನನಗೆ ನನ್ನದೇ ಆದ ಮತ ಬ್ಯಾಂಕ್ ಇದೆ. ಇಲ್ಲಿಯವರೆವಿಗೂ ಮತ್ತೊಬ್ಬರ ಗೆಲುವಿಗೆ ಶ್ರಮಿಸಿದ್ದೇನೆ. ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಮತದಾರರ ಅಭಿಪ್ರಾಯದಂತೆ ನೆಡೆಯುವೆ ಎಂದು ಹೇಳಿದರು.

ಈ ಮಾತುಗಳನ್ನು ನೋಡಿದ್ರೆ ಶಿವರಾಮೇಗೌಡ್ರು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದಂತಿದೆ. ಪ್ರಸ್ತುತ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಇದೇ ನಾಗಮಂಗಲ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಆದರೂ ಶಿವರಾಮೇಗೌಡ್ರ ಹೇಳಿಕೆ ಮಾತ್ರ ರಾಜ್ಯ ರಾಜಕಾರಣದಲ್ಲಿ ಸಂಚಲ ಮೂಡಿಸಿದೆ.

ಶಿವರಾಮೇಗೌಡರ ಮಾತಿನ ರೀತಿ ನೋಡಿದ್ರೆ,  ಒಂದು ವೇಳೆ ಟಿಕೆಟ್ ಸುರೇಶ್ ಗೌಡ ಅವರಿಗೆ ಸಿಕ್ಕರೆ ಜೆಡಿಎಸ್ ತೊರೆದು ಬೇರೆ ಪಕ್ಷದಿಂದ ನಿಲ್ಲುತ್ತೇನೆ ಎನ್ನುವಂತಿದೆ.

ಇನ್ನು ಮೂರು ವರ್ಷ ಬಳಿಕವೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ಒಂದು ವೇಳೆ ಬದಲಾದ ರಾಜ್ಯ ರಾಜಕಾರಣದಿಂದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ಮಧ್ಯಂತರ ಚುನಾವಣೆ ನಡೆದರೂ ಅಚ್ಚರಿಪಡಬೇಕಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!