ಮಂಡಸೌರ್ : ಕಾಂಗ್ರೆಸ್ ನಾಯಕ ಸಿಂಧಿಯಾ ಬಂಧನ

By Suvarna Web DeskFirst Published Jun 13, 2017, 3:57 PM IST
Highlights

ಮಧ್ಯಪ್ರದೇಶದ ಮಂಡಸೌರ್​ನಲ್ಲಿ ನಡೆದ ಗೋಲಿಬಾರ್​ ಘಟನೆ ಮತ್ತೊಂದು ಸಂಘರ್ಷದ ಬೆಳವಣಿಗೆಗೆ ವೇದಿಕೆಯಾಗಿದೆ.

ಭೋಪಾಲ್ : ಮಧ್ಯಪ್ರದೇಶದ ಮಂಡಸೌರ್​ನಲ್ಲಿ ನಡೆದ ಗೋಲಿಬಾರ್​ ಘಟನೆ ಮತ್ತೊಂದು ಸಂಘರ್ಷದ ಬೆಳವಣಿಗೆಗೆ ವೇದಿಕೆಯಾಗಿದೆ.

ಗೋಲಿಬಾರ್​ನಲ್ಲಿ ಮೃತಪಟ್ಟಿದ್ದ ರೈತ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿದ್ದ ಪಟೇಲ್​ ಸಮುದಾಯದ ಮುಖಂಡ ಹಾರ್ದಿಕ್​ ಪಟೇಲ್​ನನ್ನು ಬೆಳಗ್ಗೆ ಪೊಲೀಸರು ಬಂಧಿಸಿದ್ದರು. ಇದೀಗ ಕಾಂಗ್ರೆಸ್​ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾಗೂ ಮಂಡ್​ಸೌರ್​​ ಪ್ರವೇಶಕ್ಕೆ ತಡೆ ನೀಡಲಾಗಿದೆ.

ಪ್ರತಿಭಟನಾನಿರತ ರೈತರನ್ನು ಭೇಟಿ ಮಾಡಲು ಅವಕಾಶ ನೀಡದ ಪೊಲೀಸರು, ಸಂಸದ ಸಿಂಧಿಯಾರನ್ನು ಬಂಧಿಸಿದ್ದಾರೆ. ಮಂಡಸೌರ್​ನಲ್ಲಿ ಆಕ್ರೋಶದ ಕಿಚ್ಚು ಕಾವೇರಿದ್ದು ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಪ್ರತಿಭಟನೆ ತೀವ್ರಗೊಂಡಿದೆ.

click me!