
ರೋಣ: ಆರು ತಿಂಗಳಿನಿಂದ ಮಾಸಾಶನ ನೀಡಿಲ್ಲವೆಂದು ಅಂಗವಿಕಲ ವ್ಯಕ್ತಿಯೊಬ್ಬರು ಕೊರಳಲ್ಲಿ ಹಾವು ಹಾಕಿ ಕೊಂಡು ಗುರುವಾರ ಪಟ್ಟ ಣಾದ್ಯಂತ ಸಂಚರಿಸುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದರು. ಪಟ್ಟಣದ ಕಲ್ಯಾಣ ನಗರದ ನಿವಾಸಿ ವಿಕಲಚೇತನ ಮಕ್ತುಂಸಾಬ್ ರಾಜಾಖಾನ್ ಎಂಬಾತ ಮನೆಯೊಂದರ ಅಡಿಪಾಯ ತೆಗೆಯುತ್ತಿದ್ದಾಗ ಸಿಕ್ಕ ಹಾವನ್ನು ಹಿಡಿದು ಕೊರಳಲ್ಲಿ ಪಟ್ಟಣದಲ್ಲಿ ಸುತ್ತಾಡಿದ್ದಾನೆ.
ಹಾವನ್ನು ಕೊರಳಿನಿಂದ ತೆಗೆಯುವಂತೆ ಜನರು ಹೇಳಿದರು ಆತ ತೆಗೆದಿಲ್ಲ. ಬಳಿಕ ತಹಸೀಲ್ದಾರ್ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಿದ್ದಾನೆ. ಕುಡಿದ ನಶೆಯಲ್ಲಿ ಈ ರೀತಿ ವರ್ತಿಸಿದ್ದು, ಜತೆಗೆ ಕುಷ್ಠರೋಗ ಇದ್ದವರಿಗೆ ಹಾವು ಕಚ್ಚುವುದಿಲ್ಲ ಎಂದು ತಿಳಿದು ಈ ರೀತಿಯಾಗಿ ಮಾಡಿದ್ದಾನೆ ಎಂದು ತಿಳಿದು ಬಂದಿದೆ.
ಕನ್ನಡಪ್ರಭದೊಂದಿಗೆ ಮಾತನಾಡಿದ ತಹಸೀಲ್ದಾರ್ ಶಿವಲಿಂಗಪ್ರಭು ವಾಲಿ, ಕೊರಳನಲ್ಲಿ ಹಾವು ಹಾಕಿಕೊಂಡು ನನ್ನ ಬಳಿ ಯಾವ ವ್ಯಕ್ತಿಯೂ ಬಂದಿಲ್ಲ. ಮಾಸಾಶನ ವಿಳಂಬದಿಂದ ಈ ರೀತಿಯಾಗಿ ಮಾಡಿದ್ದಾನೆ ಎಂದರೆ ಪರಿಶೀಲಿಸುವೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.