(ವಿಡಿಯೋ)ಗ್ಯಾಸ್ ಬಂಕ್'ಗೇ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಭೂಪ!: ಬೆಂಕಿ ನಂದಿಸಿದ ಸಿಬ್ಬಂದಿಗೆ 61 ಲಕ್ಷ ಬಹುಮಾನ

Published : May 27, 2017, 02:55 PM ISTUpdated : Apr 11, 2018, 01:08 PM IST
(ವಿಡಿಯೋ)ಗ್ಯಾಸ್ ಬಂಕ್'ಗೇ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ಭೂಪ!: ಬೆಂಕಿ ನಂದಿಸಿದ ಸಿಬ್ಬಂದಿಗೆ 61 ಲಕ್ಷ ಬಹುಮಾನ

ಸಾರಾಂಶ

ಚೀನಾದ ಗ್ಯಾಸ್ ಬಂಕ್'ಗೇ ಬೆಂಕಿ ಹಚ್ಚಿದ ಬೈಕ್ ಸವಾರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಸಿಬ್ಬಂದಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬೆಂಕಿ ನಂದಿಸುವುದರೊಂದಿಗೆ ಸವಾರನನ್ನೂ ಕಾಪಾಡಿದ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಇವರ ಈ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದ್ದಲ್ಲದೇ 61 ಲಕ್ಷ ನಗದು ಬಹುಮಾನವೂ ನೀಡಲಾಗಿದೆ.

ಬೀಜಿಂಗ್(ಮೇ.27): ಚೀನಾದ ಗ್ಯಾಸ್ ಬಂಕ್'ಗೇ ಬೆಂಕಿ ಹಚ್ಚಿದ ಬೈಕ್ ಸವಾರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಸಿಬ್ಬಂದಿಗಳು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಬೆಂಕಿ ನಂದಿಸುವುದರೊಂದಿಗೆ ಸವಾರನನ್ನೂ ಕಾಪಾಡಿದ ವಿಡಿಯೋ ಒಂದು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗುತ್ತಿದೆ. ಇನ್ನು ಇವರ ಈ ಸಾಹಸಕ್ಕೆ ಪ್ರಶಂಸೆ ವ್ಯಕ್ತವಾಗಿದ್ದಲ್ಲದೇ 61 ಲಕ್ಷ ನಗದು ಬಹುಮಾನವೂ ನೀಡಲಾಗಿದೆ.

ಚೀನಾಸ ಸಿಚುವಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಗ್ಯಾಸ್ ಬಂಕ್'ನಲ್ಲಿ ಅಳವಡಿಸಿದ ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಈ ದೃಶ್ಯಗಳಲ್ಲಿ ಬೈಕ್ ಸವಾರ ಮೊದಲಿಗೆ ತನ್ನ ಬೈಕ್'ನ ಪೆಟ್ರೋಲ್ ಟ್ಯಾಂಕ್ ಓಪನ್ ಮಾಡಿ ಲೈಟರ್ ಮೂಲಕ ಬೆಂಕಿ ಹಚ್ಚಲು ಯತ್ನಿಸಿದ್ದಾನೆ. ಆದರೆ ಗ್ಯಾಸ್ ಬಂಕ್ ಸಿಬ್ಬಂದಿ ಇದನ್ನು ಗಮನಿಸಿ ಬೈಕ್ ಸವಾರನ ಕೈಯ್ಯಲ್ಲಿದ್ದ ಲೈಟರ್ ಕಸಿದು ದೂರಕ್ಕೆಸೆದು, ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗುತ್ತಾರೆ. ಇಷ್ಟಕ್ಕೇ ಸುಮ್ಮನಾಗದ ಬೈಕ್ ಸವಾರ ಬೈಕ್'ನ್ನೇ ಬೆಂಕಿಯ ಮೇಲುರುಳಿಸುತ್ತಾನೆ. ಬೈಕ್ ಟ್ಯಾಂಕ್'ನಲ್ಲಿದ್ದ ಪೆಟ್ರೋಲ್'ಗೆ ಬೆಂಕಿ ಹಚ್ಚಿಕೊಂಡಿದ್ದು, ಬೈಕ್ ಬೆಂಕಿಗಾಹುತಿಯಾಗುತ್ತದೆ. ಆ ಹೊತ್ತಿಗಾಗಲೇ ಬೈಕ್ ಸವಾರ ಬೆಂಕಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸುತ್ತಾನೆ.

ಆದರೆ ಅಷ್ಟೊತ್ತಿಗಾಗಲೇ ಅಪಾಯದ ಅರಿವಾಗಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಬೈಕ್ ಸವಾರನನ್ನು ಬೆಂಕಿಯಿಂದ ಹೊರಗೆಳೆಯುವಲ್ಲಿ ಯಶಸ್ವಿಯಾಗುತ್ತಾರೆ. ಸಾಮಾಝಿಕ ಜಾಲಾತಾಣಗಲ್ಲಿ ಈ ವಿಡಿಯೋ ಭಾರೀ ಸದ್ದು ಮಾಡಿದ್ದು, ಪ್ರೇಕ್ಷಕರೆಲ್ಲರೂ ಬೈಕ್ ಸವಾರನನ್ನು ಟೀಕಿಸಿದ್ದಾರೆ ಹಾಗೂ ಸಿಬ್ಬಂದಿಗಳ ಸಮಯಪ್ರಜ್ಞೆಗೆ ತಲೆದೂಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ