20 ಸಾವಿರಕ್ಕೆ 2000 ಕಾಯಿನ್ ನೀಡಿದ ಬ್ಯಾಂಕ್..!

Published : Nov 19, 2016, 02:02 PM ISTUpdated : Apr 11, 2018, 12:58 PM IST
20 ಸಾವಿರಕ್ಕೆ 2000 ಕಾಯಿನ್ ನೀಡಿದ ಬ್ಯಾಂಕ್..!

ಸಾರಾಂಶ

ನೋಟ್ ಬ್ಯಾನ್ ಬಳಿಕ ದೆಹಲಿಯ ಇಮ್ತಿಯಾಜ್ ಅಲಾಂ, 20,000 ಹಣ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ  ದೆಹಲಿಯ ಜಾಮಿಯಾ ಕೋ ಆಪರೇಟಿವ್ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ನೋಟು ವಿನಿಮಯವಾದರೆ ದಿನಕ್ಕೆ 2 ಸಾವಿರ ರೂಪಾಯಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು ಎಂದಿದ್ದಾರೆ. ಆದರೆ, ತನಗೆ ತುರ್ತಾಗಿ ಹಣ ಬೇಕೆಂದು ಅಲಾಂ ಮ್ಯಾನೇಜರ್ ಗೆ ಮನವಿ ಮಾಡಿಕೊಂಡಿದ್ದಾರೆ. ಇವರ ಮನವಿಗೆ ಸ್ಪಂದಿಸಿದ ಬ್ಯಾಂಕ್ ಸಿಬ್ಬಂದಿ ಸೆಲ್ಫ್ ಚೆಕ್ ಮೂಲಕ ಹಣ ಡ್ರಾ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ, ನೋಟುಗಳನ್ನು ನೀಡಲು ಆಗುವುದಿಲ್ಲ. 10 ರೂಪಾಯಿ ನಾಣ್ಯವನ್ನೇ ತೆಗೆದುಕೊಳ್ಳುವಂತೆ ಹೇಳಿದ್ದಾರೆ. 15  ನಿಮಿಷಗಳ ಕಾಲ ಯೋಚಿಸಿದ ಅಲಾಂ ಬಳಿಕ ವಿಧಿ ಇಲ್ಲದೆ ನಾಣ್ಯಗಳನ್ನೇ ಸ್ವೀಕರಿಸಿದ್ದಾರೆ.

ನವದೆಹಲಿ(ನ.19): ದೇಶದಲ್ಲಿ 500, 1000 ರೂಪಾಯಿ ಮುಖಬೆಲೆಯ ನೋಟುಗಳ ನಿಷೇಧದ ಬಿಸಿ ಇನ್ನೂ ಮುಂದುವರರೆದಿದೆ. ಹಲವು ಬ್ಯಾಂಕ್, ಎಟಿಎಂಗಳ ಮುಂದೆ ಜನರ ಕ್ಯೂ ಕಡಿಮೆಯಾಗಿಲ್ಲ. ಆದರೆ, ಇಲ್ಲೊಂದು ಬ್ಯಾಂಕ್ ಹಣ ವಿನಿಮಯಕ್ಕೆ ಬಂದ ವ್ಯಕ್ತಿಗೆ ಬರೀ ನಾಣ್ಯಗಳನ್ನೇ ನೀಡಿದೆ. ಅಷ್ಟಿಷ್ಟಲ್ಲ ಬರೋಬ್ಬರಿ 2 ಸಾವಿರ ನಾಣ್ಯಗಳು.

ನೋಟ್ ಬ್ಯಾನ್ ಬಳಿಕ ದೆಹಲಿಯ ಇಮ್ತಿಯಾಜ್ ಅಲಾಂ, 20,000 ಹಣ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದಾರೆ. ಈ ವೇಳೆ  ದೆಹಲಿಯ ಜಾಮಿಯಾ ಕೋ ಆಪರೇಟಿವ್ ಬ್ಯಾಂಕ್ ಸಿಬ್ಬಂದಿಯನ್ನು ವಿಚಾರಿಸಿದಾಗ ನೋಟು ವಿನಿಮಯವಾದರೆ ದಿನಕ್ಕೆ 2 ಸಾವಿರ ರೂಪಾಯಿ ಮಾತ್ರ ವಿನಿಮಯ ಮಾಡಿಕೊಳ್ಳಬಹುದು ಎಂದಿದ್ದಾರೆ. ಆದರೆ, ತನಗೆ ತುರ್ತಾಗಿ ಹಣ ಬೇಕೆಂದು ಅಲಾಂ ಮ್ಯಾನೇಜರ್ ಗೆ ಮನವಿ ಮಾಡಿಕೊಂಡಿದ್ದಾರೆ. ಇವರ ಮನವಿಗೆ ಸ್ಪಂದಿಸಿದ ಬ್ಯಾಂಕ್ ಸಿಬ್ಬಂದಿ ಸೆಲ್ಫ್ ಚೆಕ್ ಮೂಲಕ ಹಣ ಡ್ರಾ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಆದರೆ, ನೋಟುಗಳನ್ನು ನೀಡಲು ಆಗುವುದಿಲ್ಲ. 10 ರೂಪಾಯಿ ನಾಣ್ಯವನ್ನೇ ತೆಗೆದುಕೊಳ್ಳುವಂತೆ ಹೇಳಿದ್ದಾರೆ. 15  ನಿಮಿಷಗಳ ಕಾಲ ಯೋಚಿಸಿದ ಅಲಾಂ ಬಳಿಕ ವಿಧಿ ಇಲ್ಲದೆ ನಾಣ್ಯಗಳನ್ನೇ ಸ್ವೀಕರಿಸಿದ್ದಾರೆ.

ತುರ್ತಾಗಿ ನಗದು ಬೇಕಾಗಿದ್ದರಿಂದ ಇಮ್ತಿಯಾಜ್ ಅಲಾಂ ಕೂಡ ನಾಣ್ಯಗಳನ್ನ ಸ್ವೀಕರಿಸಿದ್ದಾರೆ. 20,000 ಮೊತ್ತಕ್ಕೆ ಬರೋಬ್ಬರಿ 10 ರೂ. 2000 ನ್ಯಾಣಗಳು ಇವರಿಗೆ ಸಿಕ್ಕಿವೆ.. ಈ ನಾಣ್ಯ ಸುಮಾರು 15 ಕೆ.ಜಿ. ತೂಕ ಇವೆ. ಒಟ್ಟಾರೆ. ಸದ್ಯಕ್ಕಂತೂ ಇವರ ಮನೆಯಲ್ಲೂ ನಾಣ್ಯಗಳದ್ದೇ ಕಾರುಬಾರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅನ್ಯ ಧರ್ಮಿಯ ಜೊತೆ ಮದುವೆ: ಪುತ್ರಿಗೆ ಅಪ್ಪನ ಆಸ್ತಿಯಲ್ಲಿ ಹಕ್ಕಿಲ್ಲ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ರಸಗೊಬ್ಬರ ಬಳಕೆ ಕಡಿಮೆ ಮಾಡಿ, ಮಣ್ಣಿನ ಆರೋಗ್ಯ ಕಾಪಾಡಿ: ಸಿಎಂ ಸಿದ್ದರಾಮಯ್ಯ ಸಲಹೆ