
ಮೈಸೂರು(ಮಾ.07): ಸರಸಕ್ಕೆ ಬಾ ಎಂದು ಪೀಡಿಸುತ್ತಿದ್ದ ವ್ಯಕ್ತಿಗೆ ಮಹಿಳೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಪಾಲಿಕೆ ಕಚೇರಿಯಲ್ಲಿ ಚುನಾವಣಾ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಗಾಯತ್ರಿಗೆ ಯತಿರಾಜ ಎಂಬಾಕೆ ದಿನಾಲೂ ಕಾಟ ಕೊಡುತ್ತಿದ್ದ. ಕುಡಿದ ಮತ್ತಿನಲ್ಲಿ ಮೆಸೇಜ್ ಮಾಡಿ ಸರಸಕ್ಕೆ ಬಾ ಎಂದು ಹಿಂಸೆ ಕೊಡುತ್ತಿದ್ದ. ಆದರೆ, ಇದಕ್ಕೆ ಗಾಯತ್ರಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಯತಿರಾಜ್ ಪಾಲಿಕೆ ಕಚೇರಿಗೆ ಬಂದು ಕಾಟ ಕೊಡಲು ಪ್ರಾರಂಭಿಸಿದ.
ಇದರಿಂದ ಬೇಸತ್ತ ಗಾಯತ್ರಿ ಪಾಲಿಕೆ ಆವರಣದಲ್ಲೇ ಸಾರ್ವಜನಿಕರೆದುರೇ ಯತಿರಾಜನಿಗೆ ಧರ್ಮದೇಟು ನೀಡಿದ್ದಾಳೆ. ಜತೆಗೆ ಕಾಲಿನಲ್ಲಿದ್ದ ಚಪ್ಪಲಿ ಸೇವೆಯೂ ಮಾಡಿದ್ದಾಳೆ. ಇನ್ನು, ಪತಿ ನಿಧನರಾದ ಹಿನ್ನೆಲೆಯಲ್ಲಿ ಅನುಕಂಪ ಆಧಾರದ ಮೇಲೆ ಗಾಯತ್ರಿ ಕೆಲಸ ಪಡೆದಿದ್ರು. ಇದಕ್ಕೆ ಯತಿರಾಜ್ ಕೂಡ ನೆರವು ನೀಡಿದರು ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.