ಕೋಲಾರಕ್ಕೂ ತಾಗಿತೆ ಭಯೋತ್ಪಾದಕರ ನಂಟು?

Published : Jun 20, 2018, 07:31 PM ISTUpdated : Jun 20, 2018, 08:07 PM IST
ಕೋಲಾರಕ್ಕೂ  ತಾಗಿತೆ ಭಯೋತ್ಪಾದಕರ ನಂಟು?

ಸಾರಾಂಶ

ಮಂಗಳೂರು ಆಯಿತು ಭಟ್ಕಳ ಆಯಿತು ಇದೀಗ ಕೋಲಾರಕ್ಕೂ ಭಯೋತ್ಪಾದಕರ ನಂಟು ತಾಗಿತೆ? ಎನ್ನುವ ಪ್ರಶ್ನೆ ಬುಧವಾರ ಕೋಲಾರದ ಪೊಲೀಸರ ಕಾರ್ಯದ ನಂತರ ವ್ಯಕ್ತವಾಗಿದೆ. ಹಾಗಾದರೆ ಕೋಲಾರದ ಪೊಲೀಸರು ಮಾಡಿದ ಕೆಲಸ ಏನು? 

ಕೋಲಾರ [ಜೂ.20] ಮಂಗಳೂರು ಆಯಿತು ಭಟ್ಕಳ ಆಯಿತು ಇದೀಗ ಕೋಲಾರಕ್ಕೂ ಭಯೋತ್ಪಾದಕರ ನಂಟು ತಾಗಿತೆ? ಎನ್ನುವ ಪ್ರಶ್ನೆ ಬುಧವಾರ ಕೋಲಾರದ ಪೊಲೀಸರ ಕಾರ್ಯಾಚರಣೆ ನಂತರ ವ್ಯಕ್ತವಾಗಿದೆ.

ಭಯೋತ್ಪಾದನೆ ಚಟುವಟಿಕೆ ಪರವಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಕೋಲಾರದ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೋಲಾರದ ಆರ್ಥಿಕ ಮತ್ತು ಮಾದಕ ದ್ರವ್ಯ ಪೊಲೀಸ್ ದಳ ಬಂಗಾರಪೇಟೆ ತಾಲೂಕಿನ ಹುಣಸನಹಳ್ಳಿಯ ಗೋವಿಂದ ಎಂಬಾತನನ್ನು ಅನುಮಾನದ ಮೇಲೆ ಬಂಧಿಸಿದೆ.

ಆರೋಪಿಯಿಂದ ವಿವಿಧ ಕಂಪನಿಗೆ ಸೇರಿದ 35 ಸಿಮ್ ಕಾರ್ಡ್ ಗಳನ್ನು ವಶಕ್ಕೆ ಪಡೆಯಲಾಗಿದೆ. ನಾಲ್ಕು ತಿಂಗಳಿನಿಂದ ಹುಣಸನಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆ ಪಡೆದು ಗೋವಿಂದ ವಾಸವಿದ್ದ ಎಂಬ ಮಾಹಿತಿ ಗೊತ್ತಾಗಿದೆ.ಉಗ್ರ ಒಸಾಮಾ ಬಿನ್‌ ಲಾಡೆನ್ ಬಗ್ಗೆ ಮೆಚ್ಚುಗೆ ಇಟ್ಟುಕೊಂಡಿದ್ದ ಗೋವಿಂದ, ಮೋದಿ ಮನ್ ಕಿ ಬಾತ್ ಟೀಕಿಸುವ ಪೋಸ್ಟ್ ಗಳನ್ನು ಸಾಮಾಜಿಕ ತಾಣದಲ್ಲಿ ಹರಿದು ಬಿಡುತ್ತಿದ್ದ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಿಪೇರಿಗೆ 5 ಗಂಟೆ ಬೇಕೆಂದ ರೈಲ್ವೆ ಅಧಿಕಾರಿಗಳು; ಸುತ್ತಿಗೆಯಿಂದ 10 ನಿಮಿಷದಲ್ಲಿ ಸರಿ ಮಾಡಿದ ಅಂಕಲ್
ಅಂಕಣ | ರಾಜ್ಯದಲ್ಲಿ ಕಾಂಗ್ರೆಸ್‌ನಿಂದ ಉದ್ಯೋಗದ ನವಯುಗ!