
ಮಂಗಳೂರು(ಅ.17): ಹೊಸ ಬಾಳಿನ ಹೊಸ್ತಿಲಲ್ಲಿನ ಜೀವನಕ್ಕೆ ಆಣಿಯಾಗಿ ಮದುಮಗಳಿಗೆ ತಾಳಿಯನ್ನು ಕಟ್ಟಲು ಸಿದ್ದವಾಗಿದ್ದ ಮದುಮಗನಿಗೆ ಪೊಲೀಸರು ಬೇಡಿ ತೊಡಸಿದ್ದಾರೆ. ಮಂಗಳೂರು ಜಿಲ್ಲೆಯ ಮದುಮಗ ಸುಬ್ರಹ್ಮಣ್ಯ ಪಟ್ಟಣದ ನಿವಾಸಿ ಕಿರಣ್ ಎಂಬಾತನಿಗೆ ಗೋಣಿಬೀಡು ಸಮೀಪದ ಗ್ರಾಮವೊಂದರ ಹಳ್ಳಿಯ ಯುವತಿಯೊಂದಿಗೆ ಈತನ ವಿವಾಹ ನಿಗದಿಯಾಗಿತ್ತು.
ಸಂಬಂದಿಕರೊಂದಿಗೆ ಮದುವೆ ಶಾಸ್ತ್ರಕ್ಕಾಗಿ ಕಿರಣ್ ಕಲ್ಯಾಣ ಮಂಟಪಕ್ಕೆ ಆಗಮಿಸಿದ. ಈ ವೇಳೆ ಸಿನಿಮೀಯ ಮಾದರಿಯಲ್ಲಿ ಬಂದ ಪೊಲೀಸರು ಮದುಮಗನನ್ನು ಬಂದಿಸಿ ಕರೆದೊಯ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಜನ್ನಾಪುರದ ವರ್ತಕರ ಸಮೂದಾಯ ಭವನದಲ್ಲಿ ನಡೆದಿದೆ. ಬೆಂಗಳೂರಿನಲ್ಲಿ ವಾಸಿಸುತಿದ್ದ ಮದುಮಗ ಕಿರಣ ತನಗೆ ಬಾಡಿಗೆ ಮನೆ ನೀಡಿದ್ದ ಒಬ್ಬಂಟಿ ವೃದ್ಧೆ ಮಹಿಳೆಯನ್ನು ಆಗಷ್ಟ 13ರಂದು ಕೊಲೆ ಮಾಡಿರುವ ಆಪಾದನೆಯ ಮೇರೆಗೆ, ರಾಮನಗರದ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.