
ಭೂಪಾಲ್ (ಅ.17): ಅಯೋಧ್ಯೆಯು ರಾಮಜನ್ಮಭೂಮಿ ಎಂಬ ವಿಚಾರವು ವಿವಾದಾತೀತವಾಗಿದೆ. ಅಯೋಧ್ಯೆಯ ಜಮೀನಿನ ಮಾಲಿಕತ್ವದ ವಿಚಾರದಲ್ಲಿ ಇರುವ ಬಿಕ್ಕಟ್ಟು ಶೀಘ್ರದಲ್ಲಿಯೇ ಬಗೆಹರಿಯುವುದು ಎಂದು ಜಲಸಂಪನ್ಮೂಲ ಸಚಿವೆ ಉಮಾಭಾರತಿ ಹೇಳಿದ್ದಾರೆ.
ವಿವಾದ ಇರುವುದು ಅಯೋಧ್ಯೆ ರಾಮ ಜನ್ಮಭೂಮಿ ಹೌದೋ ಅಲ್ಲವೋ ಅಂತಲ್ಲ. ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠವು ಇದು ರಾಮಜನ್ಮಭೂಮಿ ಹೌದು ಎಂದು ತೀರ್ಪು ಹೇಳಿದೆ. ಈ ಜಮೀನು ವಕ್ಫ್ ಮಂಡಳಿಗೆ ಸೇರಿದ್ದೋ ಅಥವಾ ರಾಮಜನ್ಮ ಭೂಮಿ ನ್ಯಾಸಕ್ಕೆ ಸೇರಿದ್ದೋ ಎಂಬುದರ ಕುರಿತಂತೆ ವಿವಾದ ಬಗೆಹರಿಯಬೇಕಿದೆ ಎಂದು ಉಮಾ ಭಾರತಿ ಹೇಳಿದ್ದಾರೆ.
ಬಿಜೆಪಿ ಎಂಪಿ ವಿನಯ್ ಕಟಿಯಾರ್ ರಾಮಜನ್ಮಭೂಮಿ ವಿಚಾರವನ್ನು ಎತ್ತಿದ್ದು ಆ ಜಾಗದಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಲು ಲೋಕಸಭೆಯಲ್ಲಿ ಮಸೂದೆ ಮಂಡಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದ್ದಾರೆ. ರಾಮ ಮಂದಿರವು ಬಿಜೆಪಿಯ ಮೊದಲ ಆದ್ಯತೆ ಎಂದು ಒತ್ತಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.