ತಂಟೆಗೆ ಬಂದರೆ ಪೀಸ್, ಪೀಸ್ ಆಗ್ತೀರಾ: ಬಿಜೆಪಿಗೆ ದೀದಿ ಎಚ್ಚರಿಕೆ

Published : Jun 06, 2019, 07:26 AM ISTUpdated : Jun 06, 2019, 07:27 AM IST
ತಂಟೆಗೆ ಬಂದರೆ ಪೀಸ್, ಪೀಸ್ ಆಗ್ತೀರಾ: ಬಿಜೆಪಿಗೆ ದೀದಿ ಎಚ್ಚರಿಕೆ

ಸಾರಾಂಶ

ತಂಟೆಗೆ ಬಂದರೆ ಚೂರು, ಚೂರು ಆಗ್ತೀರಾ: ಬಿಜೆಪಿಗೆ ದೀದಿ ಎಚ್ಚರಿಕೆ| ರಂಜಾನ್‌ ನಿಮಿತ್ತ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ ಉದ್ದೇಶಿಸಿ ಮಾತನಾಡುವ ವೇಳೆ ದೀದಿ ಎಚ್ಚರಿಕೆ  

ಕೋಲ್ಕತಾ[ಮೇ.06]: ಲೋಕಸಭೆ ಚುನಾವಣೆಯಲ್ಲಿ ಅಚ್ಚರಿಯ ರೀತಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಲ ವೃದ್ಧಿಸಿಕೊಂಡಿರುವ ಬಿಜೆಪಿ ವಿರುದ್ಧ ತೃಣಮೂಲ ಕಾಂಗ್ರೆಸ್‌ ಅಧಿನಾಯಕಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುಡುಗಿದ್ದಾರೆ. ‘ನಮ್ಮ ತಂಟೆಗೆ ಬರುವವರು ಚೂರು ಚೂರು ಆಗಿ ಹೋಗುತ್ತಾರೆ’ ಎಂದು ನೇರ ಎಚ್ಚರಿಕೆ ನೀಡಿದ್ದಾರೆ.

ರಂಜಾನ್‌ ನಿಮಿತ್ತ ಮುಸ್ಲಿಮರ ಸಾಮೂಹಿಕ ಪ್ರಾರ್ಥನೆ ಉದ್ದೇಶಿಸಿ ಮಾತನಾಡಿದ ಅವರು, ಮುಸ್ಲಿಮರು ಯಾವುದೇ ಕಾರಣಕ್ಕೂ ಹೆದರಬಾರದು. ನಮ್ಮ ತಂಟೆಗೆ ಬರಲು ಯತ್ನಿಸುವವರು ನಾಶವಾಗಿ ಹೋಗುತ್ತಾರೆ ಎಂಬರ್ಥದಲ್ಲಿ ಹೇಳಿದರು.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಬೆಳವಣಿಗೆಯನ್ನು ಸೂರ್ಯೋದಯದ ಜತೆ ಹೋಲಿಕೆ ಮಾಡುತ್ತಿರುವುದಕ್ಕೂ ಚಾಟಿ ಬೀಸಿದ ಅವರು, ಸೂರ್ಯ ಹುಟ್ಟಿದಾಗ ಕಠೋರವಾಗಿರುತ್ತಾನೆ. ಮತಯಂತ್ರಗಳನ್ನು ವಶಪಡಿಸಿಕೊಂಡು ಬಿಜೆಪಿ ರಾಜ್ಯದಲ್ಲಿ ಉದಯವಾಗಿದೆ. ಸೂರ್ಯನ ಹಾದಿಯಲ್ಲೇ ಅದು ಸಾಗಲಿದೆ ಎಂದು ಬಿಜೆಪಿಯ ಸ್ಥಿತಿ ಇದೇ ರೀತಿ ಹೆಚ್ಚು ದಿನ ಇರುವುದಿಲ್ಲ ಎಂದು ವಿಶ್ಲೇಷಿಸಿದರು.

ರಂಜಾನ್‌ ಪ್ರಯುಕ್ತ ಉಪವಾಸ ಮಾಡಿದ್ದೀರಿ. ಚಿಂತೆ ಪಡಬೇಕಿಲ್ಲ. ಅಸಮಾಧಾನಕ್ಕೂ ಒಳಗಾಗಬೇಕಿಲ್ಲ. ಒಳ್ಳೆಯ ಕೆಲಸ ಮಾಡಿ, ಪ್ರಗತಿ ಹೊಂದಿರಿ. ಮಾನವೀಯತೆ ಪರ ಕೆಲಸ ಮಾಡಿ ಎಂದು ಮುಸಲ್ಮಾನರಿಗೆ ಕರೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಿಧಾನಸಭೆಯಲ್ಲಿ ಸಿಎಂ ಕುರ್ಚಿಯದ್ದೇ ಗುದ್ದಾಟ: ಬೈರತಿ 'ಕಿಂಗ್ ಅಲೈವ್' ಅಂದಿದ್ದು ಯಾಕೆ? ಆರ್ ಅಶೋಕ್, ಬೈರತಿ ವಾಕ್ಸಮರ!
Video: ಚಲಿಸುವ BMTC ಬಸ್ಸಲ್ಲಿ ಸ್ಟೇರಿಂಗ್ ಹಿಡಿದು ಡ್ರೈವರ್‌ಗಳ ಕಿತ್ತಾಟ; ಪ್ರಯಾಣಿಕರಿಗೆ ಪ್ರಾಣ ಸಂಕಟ!