ದಲಿತ ಎಂದು ನನಗೆ ವಿಪಕ್ಷ ಸ್ಥಾನ ಕೊಡಲಿಲ್ಲ

Published : May 04, 2018, 08:26 AM IST
ದಲಿತ ಎಂದು ನನಗೆ ವಿಪಕ್ಷ ಸ್ಥಾನ ಕೊಡಲಿಲ್ಲ

ಸಾರಾಂಶ

‘ಮೊಹಬ್ಬತ್ ಮೇರಾ ಸಾಥ್, ಶಾದಿ ದೂಸ್ರೋಂಕೆ ಸಾಥ್(ಪ್ರೀತಿ ನನ್ನ ಜೊತೆ, ವಿವಾಹ ಬೇರೊಬ್ಬರ ಜೊತೆ)’ ಎಂಬಂತಿದೆ ಮೋದಿ ನೀತಿ. ಪ್ರಧಾನಿ ಮೋದಿ ಹಾಗೂ ಬಿಜೆಪಿ ದಲಿತರನ್ನು ಪ್ರೀತಿಸುವಂಥ ನಾಟಕವಾಡುತ್ತ ದಲಿತರನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದ್ದು ಇದೀಗ ಬಟಾಬಯಲಾಗಿದೆ.

ಹುಮನಾಬಾದ್: ‘ಮೊಹಬ್ಬತ್ ಮೇರಾ ಸಾಥ್, ಶಾದಿ ದೂಸ್ರೋಂಕೆ ಸಾಥ್(ಪ್ರೀತಿ ನನ್ನ ಜೊತೆ, ವಿವಾಹ ಬೇರೊಬ್ಬರ ಜೊತೆ)’ ಎಂಬಂತಿದೆ ಮೋದಿ ನೀತಿ. ಪ್ರಧಾನಿ ಮೋದಿ ಹಾಗೂ ಬಿಜೆಪಿ ದಲಿತರನ್ನು ಪ್ರೀತಿಸುವಂಥ ನಾಟಕವಾಡುತ್ತ ದಲಿತರನ್ನು ಹತ್ತಿಕ್ಕುವ ಪ್ರಯತ್ನ ನಡೆಸಿದ್ದು ಇದೀಗ ಬಟಾಬಯಲಾಗಿದೆ.

ನಾನು ದಲಿತ ಎಂಬ ಕಾರಣಕ್ಕೆ ಕೇಂದ್ರದಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನ ಸಿಗದಂತೆ ಬಿಜೆಪಿ ವ್ಯವಸ್ಥಿತವಾಗಿ ನೋಡಿಕೊಂಡಿದೆ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಕಾರ‌್ಯಕರ್ತರ ಸಭೆಯಲ್ಲಿ ಮೋದಿಯವರ ‘ದಲಿತ ಸಿಎಂ’ ಹೇಳಿಕೆಗೆ ತಿರುಗೇಟು ನೀಡಿದ ಅವರು, ಮೋದಿ ಅವರು ದಲಿತ ಉದ್ಧಾರದ  ಮಾತುಗಳನ್ನಾಡುತ್ತಾರೆ, ಆದರೆ ಅದರಲ್ಲಿ ಯಾವುದೇ ಹುರುಳಿಲ್ಲ ಎಂಬುವುದಕ್ಕೆ ನನಗೆ ವಿರೋಧ ಪಕ್ಷದ ಸ್ಥಾನ ಸಿಗದಂತೆ ನೋಡಿಕೊಂಡಿದ್ದೇ ಸಾಕ್ಷಿ ಎಂದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?