ಮುಂಬೈಗೆ ಹಾರಿದ ಅತೃಪ್ತರು.. ಊಟೋಪಚಾರ ನೋಡ್ಕೋತಾರೆ ಬಿಜೆಪಿಯ ಈ ಶಾಸಕರು!

Published : Jul 06, 2019, 06:44 PM ISTUpdated : Jul 06, 2019, 08:33 PM IST
ಮುಂಬೈಗೆ ಹಾರಿದ ಅತೃಪ್ತರು.. ಊಟೋಪಚಾರ ನೋಡ್ಕೋತಾರೆ ಬಿಜೆಪಿಯ ಈ ಶಾಸಕರು!

ಸಾರಾಂಶ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ 14 ಅತೃಪ್ತ ಶಾಸಕರು ಮುಂಬೈ ಅಥವಾ ಗೋವಾಕ್ಕೆ ತೆರಳುವುದು ಪಕ್ಕಾ ಆಗಿದೆ. ಈ ಎಲ್ಲ ಶಾಸಕರ ಉಸ್ತುವಾರಿಯನ್ನು ಬಿಜೆಪಿಯ ಶಾಸಕರೊಬ್ಬರೆ ನೋಡಿಕೊಳ್ಳಲಿದ್ದಾರೆ.

ಬೆಂಗಳೂರು[ಜು. 06]  ಕರ್ನಾಟಕದಲ್ಲಿ ಇದ್ದಕ್ಕಿದ್ದಂತೆ ರಾಜಕೀಯ ಕ್ಷಿಪ್ರ ಕ್ರಾಂತಿ ಆಗಿಹೋಗಿದೆ. ಎಲ್ಲ ಊಹಾಪೋಹಗಳನ್ನು ಮೀರಿ ಬೆಂಗಳೂರು ಶಾಸಕರು ಆಗಮಿಸಿ ರಾಜೀನಾಮೆ ನೀಡಿದ್ದಾರೆ’.

ಹಾಗಾದರೆ ರಾಜೀನಾಮೆ ನೀಡಿರುವ ಶಾಸಕರು ಮುಂದೆ ಎಲ್ಲಿಗೆ ತೆರಳುತ್ತಿದ್ದಾರೆ। ಅವರನ್ನು ನೋಡಿಕೊಳ್ಳುವವರು ಯಾರು?  ಶಾಸಕರು ಮುಂಬೈ ಅಥವಾ ಗೋವಾಕ್ಕೆ ತೆರಳುವುದು ಪಕ್ಕಾ ಆಗಿದೆ. ಮುಂಬೈ ನಲ್ಲಿ ಮಳೆ ಇರುವುದುದರಿಂದ ಗೋವಾಕ್ಕೆ ತೆರಳುವ ಸಾಧ್ಯತೆಯೇ ಹೆಚ್ಚಾಗಿದೆ. ಆದರೆ ಇದೆಲ್ಲದಕ್ಕಿಂತ ಮುಖ್ಯವಾದ ವಿಚಾರ ಎಂದರೆ ರಾಜೀನಾಮೆ ನೀಡಿರುವ ಶಾಸಕರ ಉಸ್ತುವಾರಿಯನ್ನು ಬಿಜೆಪಿಯ ಶಾಸಕರೊಬ್ಬರೆ ನೋಡಿಕೊಳ್ಳುತ್ತಿದ್ದಾರೆ.

ರಾಜೀನಾಮೆ ಪರ್ವ ಎಲ್ಲಿಂದ ಎಲ್ಲಿವರೆಗೆ? 

ಮಲ್ಲೇಶ್ವರಂ ಶಾಸಕ ಡಾ. ಅಶ್ವಥ್ ನಾರಾಯಣ ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದಾರೆ.ಅವರ ಜತಯೆಗೆ  ಬಿಜೆಪಿಯ ಎಲ್ಲಾ ಆರ್ಥಿಕ ವ್ಯವಹಾರ ನೋಡಿಕೊಳ್ಳುವ ಪಳನಿ ಸಹ ಇದ್ದಾರೆ ಎನ್ನಲಾಗಿದೆ.

ಈ ಹಿಂದೆ ಅತೃಪ್ತ ಶಾಸಕರು ಮುಂಬೈಗೆ ತೆರಳಿದ್ದಾಗಲೂ ಅಶ್ವಥ್ ನಾರಾಯಣ ಅವರೇ ಉಸ್ತುವಾರಿ ವಹಿಸಿಕೊಂಡಿದ್ದು ಜಗಜ್ಜಾಹೀರಾಗಿತ್ತು. ಅಂದು ಕಾಂಗ್ರೆಸ್ ಶಾಸಕರಾಗಿದ್ದ ಡಾ. ಉಮೇಶ್ ಜಾಧವ್ ಕಾಂಗ್ರೆಸ್ ಗೆ ಗುಡ್ ಬೈ  ಹೇಳಿ ಬಿಜೆಪಿ  ಸೇರಿದ್ದರು. ಅಲ್ಲಿಂದ ನಂತರ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ  ಅವರನ್ನು ಸೋಲಿಸಿ ಸಂಸದರಾಗಿ ಆಯ್ಕೆಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ