ಕೇಂದ್ರ ಸರ್ಕಾರದಿಂದ 'ಸಂಪದ' ನೂತನ ಆಹಾರ ಸಂಸ್ಕರಣ ಯೋಜನೆ ಘೋಷಣೆ

Published : May 26, 2017, 06:04 PM ISTUpdated : Apr 11, 2018, 12:34 PM IST
ಕೇಂದ್ರ ಸರ್ಕಾರದಿಂದ 'ಸಂಪದ' ನೂತನ ಆಹಾರ ಸಂಸ್ಕರಣ ಯೋಜನೆ ಘೋಷಣೆ

ಸಾರಾಂಶ

 ಕೇಂದ್ರ ಸರ್ಕಾರವು ‘ಸಂಪದ’ ಎನ್ನುವ ನೂತನ ಆಹಾರ ಸಂಸ್ಕರಣೆ ಯೋಜನೆಯನ್ನು ಘೋಷಿಸಿದ್ದು ಅದಕ್ಕೆ 6 ಸಾವಿರ ಕೋಟಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಜೊತೆಗೆ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದು ಇದು 2 ನೇ ಹಸಿರು ಕ್ರಾಂತಿಯಲ್ಲ ಆದರೆ ನಿರಂತರ ಕ್ರಾಂತಿ ಆಗಲಿದೆ ಎಂದು ಅಸ್ಸಾಂನಲ್ಲಿಂದು ಮೋದಿ ಹೇಳಿದ್ದಾರೆ.

ನವದೆಹಲಿ (ಮೇ.26):ಕೇಂದ್ರ ಸರ್ಕಾರವು ‘ಸಂಪದ’ ಎನ್ನುವ ನೂತನ ಆಹಾರ ಸಂಸ್ಕರಣೆ ಯೋಜನೆಯನ್ನು ಘೋಷಿಸಿದ್ದು ಅದಕ್ಕೆ 6 ಸಾವಿರ ಕೋಟಿ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಜೊತೆಗೆ 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವ ಭರವಸೆ ನೀಡಿದ್ದು ಇದು 2 ನೇ ಹಸಿರು ಕ್ರಾಂತಿಯಲ್ಲ ಆದರೆ ನಿರಂತರ ಕ್ರಾಂತಿ ಆಗಲಿದೆ ಎಂದು ಅಸ್ಸಾಂನಲ್ಲಿಂದು ಮೋದಿ ಹೇಳಿದ್ದಾರೆ.

ಪ್ರಧಾನಿ ಮೋದಿ ಅಸ್ಸಾಂನ ಧೇಮಾಜಿ ಜಿಲ್ಲೆಯಲ್ಲಿ ಕೃಷಿ ಸಂಶೋಧನಾ ಕೇಂದ್ರದ ಶಂಕುಸ್ಥಾಪನೆ ಮಾಡಿ, ಜನತೆಯನ್ನುದ್ದೇಶಿಸಿ ಮಾತನಾಡುತ್ತಾ, North-East (ಈಶಾನ್ಯ) ಗೆ ಹೊಸ ವ್ಯಾಖ್ಯಾನವನ್ನು ನೀಡಿದರು.

NE ಎಂದರೆ North East ಒಂದೇ ಅಲ್ಲ, New Economy, New Energy, New Empowerment, New Engine ಎಂದರ್ಥ. ಇದು ನಮ್ಮ ಸರ್ಕಾರದ ಕನಸಾದ ಹೊಸ ಭಾರತವನ್ನು ಹುಟ್ಟು ಹಾಕಲಿದೆ ಎಂದು ಈಶಾನ್ಯ ರಾಜ್ಯದ ಜನತೆಗೆ ಹೊಸ ಹುರುಪನ್ನು ತುಂಬಿದರು.

ಕೃಷಿ ಸಂಶೋಧನಾ ಸಂಸ್ಥೆ ಅಸ್ಸಾಂಗೆ ವರದಾನವಾಗಿದೆ.  ಸಾವಯವ ಕೃಷಿ ಮಾಡಲು ನಮ್ಮ ದೇಶಕ್ಕೆ ಅಪಾರ ಸಾಮರ್ಥ್ಯವಿದೆ. ಅದರಲ್ಲೂ ಈಶಾನ್ಯ ಭಾರತಕ್ಕೆ ಇನ್ನೂ ಹೆಚ್ಚಿನ ಸಾಮರ್ಥ್ಯವಿದೆ ಎಂದರು. ಕಾರ್ಯಕ್ರಮದ ಕೊನೆಯಲ್ಲಿ ಕೇಂದ್ರ ಸರ್ಕಾರದ ನೂತನ ಯೋಜನೆ ‘ಸಂಪದ’ ಘೋಷಿಸಿದರು. ಈ ಯೋಜನೆ ಕೃಷಿ ಉತ್ಪನ್ನಗಳಿಗೆ ನಿಗದಿತ ಬೆಲೆಯನ್ನು ನೀಡಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ