ಪಂಚಭೂತಗಳಲ್ಲಿ ಲೀನರಾದ ಮೇಜರ್ ಅಕ್ಷಯ್

Published : Dec 01, 2016, 12:13 PM ISTUpdated : Apr 11, 2018, 01:01 PM IST
ಪಂಚಭೂತಗಳಲ್ಲಿ ಲೀನರಾದ ಮೇಜರ್ ಅಕ್ಷಯ್

ಸಾರಾಂಶ

ಬೆಳಗ್ಗೆ  ಅಕ್ಷಯ್ ಕುಮಾರ್ ಪಾರ್ಥಿವ್ ಶರೀರವನ್ನು . ಯಲಹಂಕದ ವಾಯುನೆಲೆಗೆ ವಿಶೇಷ ವಿಮಾನದಲ್ಲಿ ತರಲಾಯ್ತು.  ಮೇಜರ್ ಅಕ್ಷಯ್ ಅವರ ಪಾರ್ಥಿವ ಶರೀರವನ್ನು ಅಧಿಕಾರಿಗಳು ಬರಮಾಡಿಕೊಂಡರು. ಬಳಿಕ 12.30ರ ವರೆಗೂ ಸೇನೆಯಿಂದ ಹುತಾತ್ಮ ಯೋಧನಿಗೆ ಗೌರವ ವಂದನೆ ಸಲ್ಲಿಸಲಾಯ್ತು.

ಬೆಂಗಳೂರು (ಡಿ.01): ಜಮ್ಮು ಮತ್ತು ಕಾಶ್ಮೀರದ ನಗ್ರೋಟಾದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ಅಕ್ಷಯ್ ಕುಮಾರ್‌ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಂಗಳೂರಿನ ಹೆಬ್ಬಾಳದ ರುದ್ರಭೂಮಿಯಲ್ಲಿ ನೆರವೇರಿತು.

ಬೆಳಗ್ಗೆ  ಅಕ್ಷಯ್ ಕುಮಾರ್ ಪಾರ್ಥಿವ್ ಶರೀರವನ್ನು . ಯಲಹಂಕದ ವಾಯುನೆಲೆಗೆ ವಿಶೇಷ ವಿಮಾನದಲ್ಲಿ ತರಲಾಯ್ತು.  ಮೇಜರ್ ಅಕ್ಷಯ್ ಅವರ ಪಾರ್ಥಿವ ಶರೀರವನ್ನು ಅಧಿಕಾರಿಗಳು ಬರಮಾಡಿಕೊಂಡರು. ಬಳಿಕ 12.30ರ ವರೆಗೂ ಸೇನೆಯಿಂದ ಹುತಾತ್ಮ ಯೋಧನಿಗೆ ಗೌರವ ವಂದನೆ ಸಲ್ಲಿಸಲಾಯ್ತು.

ಅಲ್ಲಿಂದ ಮೆರವಣಿಗೆಯಲ್ಲಿ ಯಲಹಂಕದ ಅಕ್ಷಯ್​ ಕುಮಾರ್​ ಅವರ ಅಪಾರ್ಟ್‍ಮೆಂಟ್​​ಗೆ ತರಲಾಯ್ತು. ಅಲ್ಲಿ ಸಂಜೆ ಯಲಹಂಕದ ಜೇಡ್​ ಗಾರ್ಡನ್ ಗೇಟ್‍ಬಳಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಮೆರವಣಿಗೆ ಮೂಲಕ ಹೆಬ್ಬಾಳದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿತು.

ಅಂತ್ಯಕ್ರಿಯೆಯಲ್ಲಿ ರಾಜಕೀಯ ಗಣ್ಯರು ಸೇರಿದಂತೆ ಅನೇಕ ಮಂದಿ ಪಾಲ್ಗೊಂಡು ಅಂತಿನ ನಮನ ಸಲ್ಲಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್‌ನಿಂದ ಗೇಟ್‌ಪಾಸ್ ಪಡೆದ ಬಾಂಗ್ಲಾದೇಶಕ್ಕೆ ಆಗುವ ನಷ್ಟವೆಷ್ಟು? ಭಾರತ ಕಳೆದುಕೊಳ್ಳೋದೇಷ್ಟು?
ಸರ್ಪದೋಷ ಪರಿಹಾರಕ್ಕೆ 'ಹಾವಿನಂತೆ ಹುಟ್ಟಿದ್ದ' 7 ತಿಂಗಳ ಮಗಳನ್ನು ಕೊಂದಿದ್ದ ಅಮ್ಮ, ಮರಣದಂಡನೆ ಶಿಕ್ಷೆ ರದ್ದು ಮಾಡಿದ ಕೋರ್ಟ್‌!