
ಮುಂಬೈ: ವರುಣನ ಅಬ್ಬರಕ್ಕೆ ವಾಣಿಜ್ಯ ನಗರಿ ಮುಂಬೈ ತತ್ತರಿಸಿ ಹೋಗಿದೆ. ರಸ್ತೆಗಳು ಜಲಾವೃತಗೊಂಡಿದ್ದು, ಅನೇಕ ಪ್ರದೇಶಗಳು ನೀರಿನಲ್ಲಿ ಮುಳುಗಡೆಗೊಂಡಿವೆ.
ಭಾರತದ ಮಾಜಿ ಟೆನಿಸ್ ಆಟಗಾರ ಮಹೇಶ್ ಭೂಪತಿ ಅವರ ಮನೆಗೂ ಇದರ ಬಿಸಿ ತಟ್ಟಿದೆ. ಭೂಪತಿ ಅವರ ಮನೆಯ ಮುಖ್ಯದ್ವಾರದ ಮುಖಾಂತರ ಮಳೆ ನೀರು ಮನೆಯೊಳಗೆ ನುಗ್ಗುತ್ತಿದ್ದು, ಇದನ್ನು ತಡೆಯಲು ಅವರ ಪತ್ನಿ ಲಾರಾ ದತ್ತಾ ಮಾಡಿರುವ ಉಪಾಯ ಭಾರೀ ಸದ್ದು ಮಾಡಿದೆ.
ವಿಂಬಲ್ಡನ್, ಆಸ್ಟ್ರೇಲಿಯಾ ಹಾಗೂ ಫ್ರೆಂಚ್ ಓಪನ್’ಗಳಲ್ಲಿ ಮಹೇಶ್ ಬಳಸಿದ ಟವೆಲ್’ಗಳನ್ನು ಮನೆಯ ದ್ವಾರದ ಬಾಗಿಲಿಗೆ ಲಾರಾ ಅಡ್ಡ ಇರಿಸಿದ್ದು, ಫೋಟೊವನ್ನು ಟ್ವೀಟ್ ಆಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹೇಶ್ ಸಿಟ್ಟಾಗಿದ್ದು, ಟ್ವೀಟರ್’ನಲ್ಲಿ ಹೀಗೆ ಪ್ರತಿಕ್ರಿಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.