ಮಹಾರಾಷ್ಟ್ರದ ಗ್ರಾಮವನ್ನು ಕರ್ನಾಟಕಕ್ಕೆ ಸೇರಿಸಲು ಗ್ರಾಮಸ್ಥರಿಂದ ಸಿಎಂಗೆ ಮನವಿ

Published : Apr 03, 2018, 10:41 AM ISTUpdated : Apr 14, 2018, 01:13 PM IST
ಮಹಾರಾಷ್ಟ್ರದ ಗ್ರಾಮವನ್ನು ಕರ್ನಾಟಕಕ್ಕೆ ಸೇರಿಸಲು ಗ್ರಾಮಸ್ಥರಿಂದ ಸಿಎಂಗೆ ಮನವಿ

ಸಾರಾಂಶ

ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಗಡಿಂಗ್ಲಾಜ್ ತಾಲೂಕಿನ ನಿಲಜಿ ಗ್ರಾಮದಲ್ಲಿರುವ ಜನರು ನಮಗೆ ಮಹಾರಾಷ್ಟ್ರದಿಂದ ಕೈ ಬಿಟ್ಟು ಚಿಕ್ಕ ರಾಜ್ಯವಾದ ಕರ್ನಾಟಕಕ್ಕೆ ಸೇರಿಸಿ ಎಂದು ಮಹರಾಷ್ಟ್ರ ಸಿ ಎಂ ದೇವೆಂದ್ರ ಫಡ್ನಾವಿಸ್ ಗೆ ಪತ್ರ ಬರೆದಿದ್ದಾರೆ.

ಮುಂಬೈ  : ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಗಡಿಂಗ್ಲಾಜ್ ತಾಲೂಕಿನ ನಿಲಜಿ ಗ್ರಾಮದಲ್ಲಿರುವ ಜನರು ನಮಗೆ ಮಹಾರಾಷ್ಟ್ರದಿಂದ ಕೈ ಬಿಟ್ಟು ಚಿಕ್ಕ ರಾಜ್ಯವಾದ ಕರ್ನಾಟಕಕ್ಕೆ ಸೇರಿಸಿ ಎಂದು ಮಹರಾಷ್ಟ್ರ ಸಿ ಎಂ ದೇವೆಂದ್ರ ಫಡ್ನಾವಿಸ್ ಗೆ ಪತ್ರ ಬರೆದಿದ್ದಾರೆ.

ಹುಕ್ಕೆರಿ ತಾಲೂಕಿನ ಸಂಕೇಶ್ವರ ಪಟ್ಟಣದಿಂದ 5 ಕೀಮಿ ಅಂತರದಲ್ಲಿರುವ‌ ಗಡಿ ಗ್ರಾಮ ಇದಾಗಿದ್ದು, ಒಂದೆಡೆ ಎಮ್ ಇ ಎಸ್ ನವರು ಬೆಳಗಾವಿಯನ್ನ ಮಹರಾಷ್ಟ್ರಕ್ಕೆ ಸೇರಿಸಿಕ್ಕೊಳ್ಳಬೇಕು ಎಂದು ಪದೆ ಪದೆ ಖ್ಯಾತೆ ತೆಗೆಯುತ್ತಿದ್ದರೆ, ಮತ್ತೊಂದಡೆ ಅವರದ್ದೆ ರಾಜ್ಯದ ಗ್ರಾಮವೊಂದ ನಮ್ಮ ಗ್ರಾಮ ಅಭಿವೃದ್ದಿ ದೃಷ್ಠಿಯಿಂದ ನಮ್ಮ ಗಡಿಂಗ್ಲಾಜ್ ತಾಲೂಕು ಶೂನ್ಯವಾಗಿದ್ದು, ರೈತರಿಗೆ ರಾಜ್ಯದಲ್ಲಿ ಮೂಲಶೌಕರ್ಯ ಜೊತೆಗೆ ಕೃಷಿ ಸಾಲದ ವಿಚಾರದಲ್ಲಿ ರೈತರನ್ನು ಕಡೆಗಣಿಸಿದೆ.

ಕರ್ನಾಟಕ ರೈತರ ಸಾಲಮನ್ನಾ ಮಾಡಿದೆ, ಕಡಿಮೆ ದರದಲ್ಲಿ ಬಡ್ಡಿಸಾಲ ನಿಡುತ್ತದೆ,  ಆದರೆ ಮಹರಾಷ್ಟ್ರ ಸರಕಾರವೂ ನಮಗೆ ಎಲ್ಲ ವಿಚಾರದಲ್ಲಿ ಕಡೆಗಣಿಸಿದೆ. ಕೇವಲ ಚುಣಾವಣೆ ಬಂದಾಗ ಮಾತ್ರ ಜನಪ್ರತಿನಿಧಿಗಳು ಬರುತ್ತಾರೆ ಎಂದು ಗ್ರಾಮಸ್ಥರು ಪಂಚಾಯತಿಯಲ್ಲಿ ಸಭೆ ನಡೆಸಿ ಕರ್ನಾಟಕ್ಕೆ ಬರಲು ತಿರ್ಮಾನ ಮಾಡಿದ್ದಾರೆ.

 ಅಭಿವೃದ್ಧಿ ಕೈಗೊಳ್ಳಿ  ಇಲ್ಲವಾದಲ್ಲಿ ನಮ್ಮನ್ನ ಕರ್ನಾಟಕ ರಾಜ್ಯಕ್ಕೆ ಸೇರಿಸಿಬಿಡಿ ಎಂದು ಮಹಾರಾಷ್ಟ್ರ ಸಿ ಎಂ ದೇವೆಂದ್ರ ಫಡ್ನಾವಿಸ್ ಅವರಿಗೆ ಮನವಿ ಪತ್ರ ಬರೆದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!
ತೋಷಖಾನಾ–2 ಪ್ರಕರಣ: ಇಮ್ರಾನ್ ಖಾನ್–ಬುಷ್ರಾ ಬೀಬಿಗೆ ತಲಾ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ತಾನ ಕೋರ್ಟ್!