ರೈತರಿಗೆ ಸಿಕ್ಕಿತು ಕೇಂದ್ರ ಸರ್ಕಾರದ ಅಭಯ

Published : Jun 18, 2018, 10:11 AM ISTUpdated : Jun 18, 2018, 10:12 AM IST
ರೈತರಿಗೆ ಸಿಕ್ಕಿತು ಕೇಂದ್ರ ಸರ್ಕಾರದ ಅಭಯ

ಸಾರಾಂಶ

ಜುಲೈ ತಿಂಗಳೊಳಗಾಗಿ ಮಹದಾಯಿ ಸಮಸ್ಯೆ ಬಗೆಹರಿಸಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ಆಗಸ್ಟ್ 1 ರಂದು ಮತ್ತೆ ನಿಮ್ಮೊಂದಿಗೆ ಚರ್ಚಿಸಲು ಮುಂದಾಗುತ್ತೇವೆ. ಪ್ರಧಾನಿಯವರು ರೈತರ ಸಮಸ್ಯೆಗೆ  ಸ್ಪಂದಿಸಲಿದ್ದಾರೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.   

ಹುಬ್ಬಳ್ಳಿ: ಉತ್ತರ ಕರ್ನಾಟಕದ ಪ್ರಮುಖ ಸಮಸ್ಯೆಯಾದ ಮಹದಾಯಿ ವಿವಾದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ  ಚರ್ಚಿಸಲು ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ನೇತೃತ್ವದಲ್ಲಿ ರಾಜಧಾನಿ ದೆಹಲಿಗೆ ತೆರಳಿದ್ದ 23 ಜನರ ರೈತರ ನಿಯೋಗ ಭಾನುವಾರ ಹುಬ್ಬಳ್ಳಿಗೆ ಆಗಮಿಸಿತು. 

ಈ ಸಂದರ್ಭದಲ್ಲಿ ಭೇಟಿಯ ವಿವರ ನೀಡಿದ ರೈತ ಮುಖಂಡ ಶಂಕ್ರಪ್ಪ ಅಂಬಲಿ, ಜುಲೈ ತಿಂಗಳೊಳಗಾಗಿ ಮಹದಾಯಿ ಸಮಸ್ಯೆ ಬಗೆಹರಿಸಲಾಗುವುದು. ಸಮಸ್ಯೆ ಬಗೆಹರಿಯದಿದ್ದರೆ ಆಗಸ್ಟ್ 1 ರಂದು ಮತ್ತೆ ನಿಮ್ಮೊಂದಿಗೆ ಚರ್ಚಿಸಲು ಮುಂದಾಗುತ್ತೇವೆ. ಪ್ರಧಾನಿಯವರು ರೈತರ ಸಮಸ್ಯೆಗೆ  ಸ್ಪಂದಿಸಲಿದ್ದಾರೆ ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. 

ಪ್ರಧಾನಿ ಅವರ ಪರವಾಗಿ ಗಡ್ಕರಿ ಅವರು ನಿಯೋಗದೊಂದಿಗೆ ಚರ್ಚೆ ಮಾಡಿ ಈ ಭರವಸೆ ನೀಡಿದರು ಎಂದರು. ಜುಲೈ 21ರಂದು ಮಹದಾಯಿ ಯೋಜನೆ ಅನುಷ್ಠಾನದ ಕುರಿತು ನ್ಯಾಯಾಧಿಕರಣದಲ್ಲಿ ಅಂತಿಮ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದ್ದು, ಗಡ್ಕರಿ ಭರವಸೆ ಮಹತ್ವ ಪಡೆದಿದೆ.

ವರದಿ ಸಲ್ಲಿಕೆ: ಜಲಸಂಪನ್ಮೂಲ ಸಚಿವ ನಿತೀನ್ ಗಡ್ಕರಿ ಭೇಟಿ ಸಂದರ್ಭದಲ್ಲಿ ನಿಯೋಗದಿಂದ ಅವರಿಗೆ 9 ಸಾವಿರ ಕೋಟಿ ವೆಚ್ಚದ 9 ತಾಲೂಕಿನ ಸಣ್ಣ ನೀರಾವರಿ ಯೋಜನೆಯ ವರದಿ ಸಲ್ಲಿಸಿದ್ದೇವೆ. ಮಹದಾಯಿ ಸಮಸ್ಯೆ ಬಗೆಹರಿಯುವ ವಿಶ್ವಾಸ ವ್ಯಕ್ತವಾಗಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಶ್ ಸೋಲಿಸ್ತಾರಾ ರಣವೀರ್.. ಬ್ಲಾಕ್ ಬಸ್ಟರ್ 'KGF 2' ಬೀಟ್ ಮಾಡಲಿದ್ಯಾ ರಣವೀರ್ "ಧುರಂಧರ್..?
ಸಿಡ್ನಿಯ ಬೋಂಡಿ ಬೀಚ್‌ನಲ್ಲಿ 15 ಜನರ ಬಲಿ ಪಡೆದ ಯಹೂದಿ ಹಬ್ಬದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಅಪ್ಪ ಮಗ