ಸಾರ್ವಜನಿಕರ ತೆರಿಗೆ ಹಣ ಉಳಿಸಲು ಮಧ್ಯಪ್ರದೇಶ ಸಚಿವರ ವಿನೂತನ ಯೋಜನೆ

Published : May 02, 2017, 05:58 PM ISTUpdated : Apr 11, 2018, 12:48 PM IST
ಸಾರ್ವಜನಿಕರ ತೆರಿಗೆ ಹಣ ಉಳಿಸಲು ಮಧ್ಯಪ್ರದೇಶ ಸಚಿವರ ವಿನೂತನ ಯೋಜನೆ

ಸಾರಾಂಶ

ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಮಾತ್ರ ಬಳಕೆ ಮಾಡುವ ಸಲುವಾಗಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಸಹದ್ಯೋಗಿಗಳಿಗೆ ಈ ಸೂಚನೆ ನೀಡಿದ್ದರು.

ಭೋಪಾಲ್(ಮೇ.02): ಸಾರ್ವಜನಿಕರ ತೆರಿಗೆ ಹಣವನ್ನು ಉಳಿತಾಯ ಮಾಡುವ ಉದ್ದೇಶದಿಂದ ಮಧ್ಯಪ್ರದೇಶ ಸರ್ಕಾರದ ಸಚಿವ ಸಂಪುಟದ ಸದಸ್ಯರು ತಮ್ಮ ಊಟದ ಡಬ್ಬಿಗಳನ್ನು ಮನೆಯಿಂದಲೇ ತಂದಿದ್ದರು. ತೆರಿಗೆ ಹಣವನ್ನು ಅಭಿವೃದ್ಧಿ ಕಾರ್ಯಗಳಿಗಾಗಿ ಮಾತ್ರ ಬಳಕೆ ಮಾಡುವ ಸಲುವಾಗಿ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ತಮ್ಮ ಸಹದ್ಯೋಗಿಗಳಿಗೆ ಈ ಸೂಚನೆ ನೀಡಿದ್ದರು. ಅದರಂತೆ, ಮಂಗಳವಾರ ನಡೆದ ವಿಧಾನಸಭೆ ಅವೇಶನಕ್ಕೆ ಎಲ್ಲ ಸಚಿವ ಸಂಪುಟ ಸದಸ್ಯರು ಊಟದ ಡಬ್ಬಿ ಸಮೇತವಾಗಿ ಬಂದಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಚೌಹಾಣ್, ‘ಮಂಗಳವಾರದ ಕ್ಯಾಬಿನೆಟ್‌ಗೆ ಎಲ್ಲ ಸದಸ್ಯರು ಅವರವರ ಮನೆಯಿಂದಲೇ ಊಟದ ಡಬ್ಬಿಗಳನ್ನು ತಂದಿದ್ದರು. ಎಲ್ಲ ನಾಯಕರೊಂದಿಗೆ ಮನೆಯಿಂದ ತಂದ ಆಹಾರವನ್ನು ಸೇವನೆ ಮಾಡಿದ್ದು ಅದ್ಭುತ ಕ್ಷಣ’ ಎಂದು ಬಣ್ಣಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಿಳೆ ಬಲಿ ಪಡೆದ ಚಿರತೆ ಕೊನೆಗೂ ಸೆರೆ, ದಾಳಿ ಮಾಡಿದ ಅದೇ ಸ್ಥಳದಲ್ಲೇ ಕಾರ್ಯಾಚರಣೆ
ಎಚ್‌ಎಎಲ್‌ ಸ್ಥಾಪನಾ ದಿನ: ಭಾರತದ ಏರೋಸ್ಪೇಸ್‌ ಸಾಧನೆಯ 86 ವರ್ಷಗಳ ಸಂಭ್ರಮಾಚರಣೆ