
ಭೋಪಾಲ್(ಏ.06): ಕೇವಲ ಬ್ರಾಹ್ಮಣರಿಗಷ್ಟೇ ಸೀಮಿತವಾಗಿದ್ದ ಪೌರೋಹಿತ್ಯವನ್ನು ಸಾರ್ವತ್ರಿಕಗೊಳಿಸಲು ಮಧ್ಯ ಪ್ರದೇಶ ಸರ್ಕಾರ ಮುಂದಾಗಿದ್ದು, ಅರ್ಚಕ ಹುದ್ದೆಗೆ ಒಂದು ವರ್ಷದ ಡಿಪ್ಲೊಮಾ ಕೋರ್ಸ್ವೊಂದನ್ನು ಆರಂಭಿಸಲಿದೆ. ಹಿಂದುಳಿದ ವರ್ಗ ಮತ್ತು ಬ್ರಾಹ್ಮಣ ಎನ್ನದೇ ಯಾರು ಬೇಕಾದರೂ ಈ ಕೋರ್ಸ್ ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಇತರ ಜಾತಿಯವರನ್ನೂ ಪುರೋಹಿತರನ್ನಾಗಿ ತರಬೇತಿ ನೀಡುವ ಪ್ರಸ್ತಾವನೆಯ ವಿರುದ್ಧ ಕಳೆದ ವರ್ಷದ ಮೇನಲ್ಲಿ ಬ್ರಾಹ್ಮಣರು ರಾಜ್ಯದೆಲ್ಲೆಡೆ ಪ್ರತಿಭಟನೆ ನಡೆಸಿದ್ದರು. ಇದರ ಹೊರತಾಗಿಯೂ ಸರ್ಕಾರ ಕೋರ್ಸ್ ಆರಂಭಿಸುತ್ತಿದೆ. ಜುಲೈನಲ್ಲಿ ‘ಪೌರೋಹಿತ್ಯಂ’ ಹೆಸರಿನ ಒಂದು ವರ್ಷದ ಡಿಪ್ಲೊಮಾ ಕೋರ್ಸ್ ಆರಂಭವಾಗಲಿದೆ.
ಪೌರೋಹಿತ್ಯದ ಬಗೆಗಿನ ಮೂಲ ಮಾಹಿತಿ, ಮಂತ್ರಗಳು ಮತ್ತು ಆಚರಣೆಗಳ ಕುರಿತು ಹೇಳಿಕೊಡಲಾಗುತ್ತಿದೆ. ಅಲ್ಲದೇ ಕೋರ್ಸ್ ಆಕಾಂಕ್ಷಿಗಳಿಗೆ ಸಂಸ್ಕಾರ ಸಾಹಿತ್ಯದ ಪಾಠವನ್ನು ಹೇಳಿಕೊಡಲಾಗುವುದು ಎಂದು ಮಹಶ್ರಿ ಪತಂಜಲಿ ಸಂಸ್ಕೃತ ಸಂಸ್ಥಾನದ ನಿರ್ದೇಶಕ ಪಿಆರ್ತಿವಾರಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.