
ಮುಂಬೈ : ಮಹಾರಾಷ್ಟ್ರ ಗೋವಾದಲ್ಲಿಯೂ ಕೂಡ ಕೇರಳ ರೀತಿಯ ಪ್ರವಾಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ ಎಂದು ಪಶ್ಚಿಮ ಘಟ್ಟಗಳ ಪರಿಸರ ತಜ್ಞರಾದ ಮಾದವ್ ಗಾಡ್ಗಿಲ್ ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಪರಿಸರದ ಕಾಳಜಿ ವಹಿಸದಿದ್ದಲ್ಲಿ ಅಲ್ಲಿಗಿಂತಲೂ ಕೂಡ ಶೋಚನೀಯ ಸ್ಥಿತಿ ಎದುರಾಗಬಹುದು ಎಂದಿದ್ದಾರೆ.
ಕೇರಳದಲ್ಲಿ ಉಂಟಾದ ಮಳೆ ಒಂದು ರೀತಿ ಆದರೆ, ಗೋವಾ ಹಾಗೂ ಮಹಾರಾಷ್ಟ್ರಗಳ ಸ್ಥಿತಿಯೇ ಬೇರೆಯಾಗಿದೆ. ಇಲ್ಲಿ ಕೇರಳದಲ್ಲಿ ಸುರಿದ ಪ್ರಮಾಣದಲ್ಲಿ ಮಳೆಯಾಗದಿದ್ದರೂ ಕೂಡ, ಭೂ ಕುಸಿತ ಹಾಗೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಗಾಡ್ಗಿಲ್ ಹೇಳಿದ್ದಾರೆ. 2014ರಲ್ಲಿ ಪುಣೆ ಹಾಗೂ ಮಲಿನ್ ಪ್ರದೇಶದಲ್ಲಿ ಉಂಟಾದ ಸ್ಥಿತಿಗತಿ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ನೀರಿನಿಂದಲೇ ಪ್ರವಾಹ ಸಂಭವಿಸುತ್ತದೇ ಎಂದೇ ಹೇಳಲಾಗದು. ಯಾವುದೇ ರೀತಿಯ ನೈಸರ್ಗಿಕ ವಿಪತ್ತೂ ಕೂಡ ಸಂಭವಿಸಬಹುದು. ಮಹಾರಾಷ್ಟ್ರ ಅನೇಕ ರೀತಿಯ ಪರಿಸರ ಸಂಬಂಧಿತ ಸಮಸ್ಯೆಗಳು ಕಾಣಿಸುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮ್ಯ ಮಟ್ಟದಲ್ಲಿ ಚರ್ಚೆಗಳಾಗುತ್ತಿವೆ ಎಂದು ಹೇಳಿದ್ದಾರೆ.
ನದಿ ಪ್ರದೇಶಗಳ ಆಕ್ರಮಣ, ಕಾಡುಗಳ ನಾಶಗಳಂತವೇ ಇಂತಹ ದುಸ್ಥಿತಿಗೆ ಕಾರಣ ಎಂದು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.