ಸೇನಾ ಮುಖ್ಯಸ್ಥರ ನೇಮಕಾತಿ ವಿವಾದ: ಪರ್ರಿಕರ್’ರನ್ನು ಭೇಟಿ ಮಾಡಿದ ಲೆ|ಜ| ಪ್ರವೀಣ್ ಬಕ್ಷಿ

Published : Dec 21, 2016, 11:50 AM ISTUpdated : Apr 11, 2018, 12:55 PM IST
ಸೇನಾ ಮುಖ್ಯಸ್ಥರ ನೇಮಕಾತಿ ವಿವಾದ: ಪರ್ರಿಕರ್’ರನ್ನು ಭೇಟಿ ಮಾಡಿದ ಲೆ|ಜ| ಪ್ರವೀಣ್ ಬಕ್ಷಿ

ಸಾರಾಂಶ

ಸೇವಾ ಹಿರಿತನದ ಆಧಾರದಲ್ಲಿ ನೂತನ ಮುಖ್ಯಸ್ಥರ ಹುದ್ದೆಗೆ ಅರ್ಹರಾಗಿದ್ದ ಪೂರ್ವ ಕಮಾಂಡ್ ಮುಖ್ಯಸ್ಥರಾಗಿದ್ದ ಲೆ|ಜ| ಪ್ರವೀಣ್ ಬಕ್ಷಿ ಬದಲಿಗೆ ಕೇಂದ್ರ ಸರ್ಕಾರವು ಲೆ|ಜ| ಬಿಪಿನ್ ರಾವತ್ ಹೆಸರನ್ನು ಅಂತಿಮಗೊಳಿಸಿತ್ತು.

ನವದೆಹಲಿ (ಡಿ.21): ಸೇವಾ ಹಿರಿತನವನ್ನು ಪರಿಗಣಿಸದೇ ಭೂಸೇನೆಗೆ ನೂತನ ಮುಖ್ಯಸ್ಥರನ್ನು ನೇಮಿಸಿರುವ ಕೇಂದ್ರ ಸರ್ಕಾರದ ಕ್ರಮವು ರಾಜಕೀಯ ವಿವಾದವನ್ನು ಸೃಷ್ಟಿಸಿರುವ ಬೆನ್ನಲ್ಲೇ, ಹಿರಿಯ ಅಧಿಕಾರಿ ಲೆ|ಜ| ಪ್ರವೀಣ್ ಬಕ್ಷಿ ಇಂದು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರನ್ನು ಭೇಟಿಯಾಗಿದ್ದಾರೆ.

ಸೇವಾ ಹಿರಿತನದ ಆಧಾರದಲ್ಲಿ ನೂತನ ಮುಖ್ಯಸ್ಥರ ಹುದ್ದೆಗೆ ಅರ್ಹರಾಗಿದ್ದ ಪೂರ್ವ ಕಮಾಂಡ್ ಮುಖ್ಯಸ್ಥರಾಗಿದ್ದ ಲೆ|ಜ| ಪ್ರವೀಣ್ ಬಕ್ಷಿ ಬದಲಿಗೆ ಕೇಂದ್ರ ಸರ್ಕಾರವು ಲೆ|ಜ| ಬಿಪಿನ್ ರಾವತ್ ಹೆಸರನ್ನು ಅಂತಿಮಗೊಳಿಸಿತ್ತು.

ಸೇನಾ ಮುಖ್ಯಸ್ಥರ ನೇಮಕಾತಿ ವಿಚಾರದಲ್ಲಿ ದಶಕಗಳಿಂದ ನಡೆದು ಬಂದ ಸಂಪ್ರದಾಯವನ್ನು ಸರ್ಕಾರ ಮುರಿದಿದೆ ಎಂದು ಪ್ರತಿಪಕ್ಷಗಳು ಆಕ್ಷೇಪಿಸಿವೆ.

ಲೆ|ಜ| ಬಿಪಿನ್ ರಾವತ್’ಕ್ಕಿಂತಲೂ ಹೆಚ್ಚು ಅನುಭವ ಹೊಂದಿದ್ದ ಲೆ|ಜ| ಪ್ರವೀಣ್ ಬಕ್ಷಿ ಹಾಗೂ ಲೆ|ಜ| ಪಿಏ ಹಾರಿಝ್ ಅಂಥವರನ್ನು ಕಡೆಗಣಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು.

ಭೂಸೇನೆಯ ನೂತನ ಮುಖ್ಯಸ್ಥರನ್ನಾಗಿ ಲೆಫ್ಟಿನೆಂಟ್ ಜನರಲ್ ಬಿಪಿನ್ ರಾವತ್ ಹಾಗೂ ವಾಯುಸೇನೆಯ ಏರ್ ಮಾರ್ಷಲ್ ಆಗಿ  ಬೀರೇಂಧರ್ ಸಿಂಗ್ ಧನೋವಾರನ್ನು ಕೇಂದ್ರ ಸರ್ಕಾರ ನೇಮಿಸಿದೆ.

ಡಿಸೆಂಬರ್ 31 ರಂದು ಹಾಲಿ ಭೂಸೇನಾ ಮುಖ್ಯಸ್ಥ ಜನರಲ್ ದಲ್ಬೀರ್ ಸಿಂಗ್ ಸುಹಾಗ್ ನಿವೃತ್ತಲಾಗಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುವ ನಿಧಿ ಯೋಜನೆ: 3.62 ಲಕ್ಷ ನಿರುದ್ಯೋಗಿಗಳ ನೋಂದಣಿ, 2,326 ಮಂದಿಗೆ ಸಿಕ್ಕಿದೆ ಕೆಲಸ!
ಇನ್ನೆರಡು ವರ್ಷದಲ್ಲಿ 175 ಕಿ.ಮೀ ಮೆಟ್ರೋ ಸೇವೆ ಜನರಿಗೆ ಲಭ್ಯ : ಡಿ.ಕೆ.ಶಿವಕುಮಾರ್