
ನವದೆಹಲಿ: ರಾಜ್ಯಸಭಾ ಕಾಲಾವಧಿ ಪೂರ್ಣಗೊಳಿಸಿದ ಸದಸ್ಯರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅವರಿಗೆ ತೂಕ ಕಡಿಮೆ ಮಾಡುಕೊಳ್ಳುವಂತೆ ಸಲಹೆ ನೀಡಿ ಟಾಂಗ್ ನೀಡಿದರು.
ವಿದಾಯ ಭಾಷಣ ಮಾಡಿದ 63ರ ಹರೆಯದ ರೇಣುಕಾ ಚೌಧರಿ, ‘ ನಾನಿಷ್ಟುದಪ್ಪ ಆಗುವುದಕ್ಕಿಂತ ಮುನ್ನವೇ ವೆಂಕಯ್ಯ ನಾಯ್ಡು ಅವರಿಗೆ ನನ್ನ ಪರಿಚಯವಿದೆ. ನನ್ನ ದೇಹದ ತೂಕ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಿ, ದೇಹದ ತೂಕ ಕಡಿಮೆ ಮಾಡಿಕೊಳ್ಳಿ ಎಂದು ಹೇಳುತ್ತಾರೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನಾಯ್ಡು, ‘ನೀವು ನಿಮ್ಮ ದೇಹದ ತೂಕ ಕಡಿಮೆ ಮಾಡಿ ಹಾಗೇ ಪಕ್ಷದ ತೂಕ ಹೆಚ್ಚಿಸಲು ಗಮನಹರಿಸಿ ಎಂಬುದು ನನ್ನ ಸಲಹೆ’ ಎಂದು ಹೇಳಿದರು. ನಾಯ್ಡು ಅವರ ಈ ಸಲಹೆಗೆ ಉತ್ತರಿಸಿದ ಚೌಧರಿ ‘ಕಾಂಗ್ರೆಸ್ಗೆ ಏನೂ ಸಮಸ್ಯೆ ಇಲ್ಲ’ ಎಂದಿದ್ದು, ಇಬ್ಬರ ನಡುವಿನ ಈ ಸಂಭಾಷಣೆ ಕೇಳಿ ಸಭೆ ನಗೆಗಡಲಲ್ಲಿ ತೇಲಿತು.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ರೇಣುಕಾರನ್ನು ಶೂರ್ಪನಖಿಗೆ ಹೋಲಿಸಿದ್ದು ವಿವಾದಕ್ಕೀಡಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.