
ನವದೆಹಲಿ: ಸೇತುವೆಗಳನ್ನು ಕೇವಲ ಉಪಯೋಗದ ದೃಷ್ಟಿಯಿಂದ ನಿರ್ಮಿಸುವ ಬದಲು ಅದನ್ನು ಪ್ರವಾಸಿ ಆಕರ್ಷಣೆಗಾಗಿಯೂ ನಿರ್ಮಿಸಬಹುದು.
ಹೌದು, ವಿಯೆಟ್ನಾಂನಲ್ಲಿ ನಿರ್ಮಾಣಗೊಂಡಿರುವ ‘ಸ್ವರ್ಣ ಸೇತುವೆ’ಯ ಮಾದರಿಯಲ್ಲಿ ಭಾರತದಲ್ಲೂ ಪ್ರವಾಸಿ ಉದ್ದೇಶದ ಸಾಂಪ್ರದಾಯಿಕ ಶೈಲಿಯ ಸೇತುವೆಗಳನ್ನು ನಿರ್ಮಿಸಲು ಕೆಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
150 ಮೀಟರ್ ಉದ್ದದ ಪಾದಾಚಾರಿ ಸೇತುವೆಯೊಂದನ್ನು ವಿಯೆಟ್ನಾಂನ ಡ ನಂಗ್ನ ಬನ ಹಿಲ್ಸ್ ರೆಸಾರ್ಟ್ನಲ್ಲಿ ಜೂನ್ನಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಈಗ ಇದು ಜಗತ್ತಿನಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತಿದೆ. ಸೇತುವೆಯನ್ನು ಕೈಗಳು ಎತ್ತಿಹಿಡಿದಂತಿದ್ದು, ಈ ಕೈಗಳ ಕೆತ್ತನೆಯಲ್ಲಿ ಮೂಡಿಸಿರುವ ಬಿರುಕುಗಳು ಅದೊಂದು ಪುರಾತನ ಕಲ್ಲಿನ ಕೆತ್ತನೆಯಂತೆ ಭಾಸವಾಗುತ್ತದೆ.
ಜಾಗತಿಕ ಪ್ರವಾಸಿಗರನ್ನು ಆಕರ್ಷಿಸಲು ಇಂತಹುದೇ ವಿನ್ಯಾಸದ ಸೇತುವೆಯನ್ನು ನಿರ್ಮಿಸಬಹುದೇ ಎಂದು ಸರ್ಕಾರ ಪರಿಶೀಲಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸೇತುವೆಗಳನ್ನು ಆಕರ್ಷಕ ಲೈಟಿಂಗ್ಸ್ ವ್ಯವಸ್ಥೆಯ ಮೂಲಕ ನಿರ್ಮಿಸಲಾಗುತ್ತಿದೆ. ರಾಮೇಶ್ವರಮ್ನಲ್ಲಿ 1.5 ಕಿ.ಮೀ. ಉದ್ದದ ದೇವಸ್ಥಾನಗಳ ವಿನ್ಯಾಸದ ಸೇತುವೆ ನಿರ್ಮಿಸುವ ಪ್ರಸ್ತಾಪವಿದೆ ಎಂದು ಎನ್ಎಚ್ಎಐ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.