ಪ್ರಜ್ವಲ್ ರೇವಣ್ಣ ಕಾಂಗ್ರೆಸ್‌ಗೆ ಬರಲಿ: ಜಮೀರ್ ಅಹ್ಮದ್

Published : Mar 24, 2018, 06:58 PM ISTUpdated : Apr 11, 2018, 01:02 PM IST
ಪ್ರಜ್ವಲ್ ರೇವಣ್ಣ ಕಾಂಗ್ರೆಸ್‌ಗೆ ಬರಲಿ: ಜಮೀರ್ ಅಹ್ಮದ್

ಸಾರಾಂಶ

ಜೆಡಿಎಸ್‌ನಲ್ಲಿ ಉಸಿರುಗಟ್ಟುವ ವಾತವರಣವಿದೆ, ಎಂದು ಮತ್ತೆ ಪುನರುಚ್ಛರಿಸಿದ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್, 'ರೇವಣ್ಣ ಮಗ ಪ್ರಜ್ವಲ್ ಕಾಂಗ್ರೆಸ್‌ಗೆ ಸೇರಿಕೊಳ್ಳಲಿ...' ಎಂದಿದ್ದಾರೆ.

ಬೆಂಗಳೂರು: ಜೆಡಿಎಸ್‌ನಲ್ಲಿ ಉಸಿರುಗಟ್ಟುವ ವಾತವರಣವಿದೆ, ಎಂದು ಮತ್ತೆ ಪುನರುಚ್ಛರಿಸಿದ ಜೆಡಿಎಸ್ ಬಂಡಾಯ ಶಾಸಕ ಜಮೀರ್ ಅಹ್ಮದ್, 'ರೇವಣ್ಣ ಮಗ ಪ್ರಜ್ವಲ್ ಕಾಂಗ್ರೆಸ್‌ಗೆ ಸೇರಿಕೊಳ್ಳಲಿ...' ಎಂದಿದ್ದಾರೆ.

ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್, 'ಪ್ರಜ್ವಲ್‌ಗೆ ಒಳ್ಳೆಯ ನಾಯಕತ್ವ ಗುಣವಿದೆ. ಜನರೊಂದಿಗೆ ಬೆರೆಯುವಂಥ ಯುವಕ. ಅಂಥವರಿಗೆ ಕುಮಾರಸ್ವಾಮಿ ಟಿಕೆಟ್ ಕೊಡುವುದಿಲ್ಲ. ಆತ ಬೆಳೆಯುವುದು ಕುಮಾರಸ್ವಾಮಿಗೆ ಇಷ್ಟವಿಲ್ಲ. ಚನ್ನಪಟ್ಟಣದಲ್ಲಿ ಅನಿತಕ್ಕನನ್ನು ಬಲಿ ಕೊಟ್ಟರು,' ಎಂದು ಆರೋಪಿಸಿದ್ದಾರೆ.

'ನಾನು ನನ್ನ‌ಹಿಂದಿನ ಹೇಳಿಕೆಗೆ ಈಗಲೂ ಬದ್ಧ. ಚಾಮರಾಜಪೇಟೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳಲಿ, ನಾನು ಅವತ್ತೇ ರುಂಡ ಕತ್ತರಿಸಿಕೊಳ್ತೇನೆ,' ಎಂದು ಶಪಥ ಮಾಡಿದರು.
 
'ನಡಹಳ್ಳಿ ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಹಾಗಂತ ಕಾಂಗ್ರೆಸ್ ನಾಯಕರು ಏನಾದ್ರೂ ಮಾತನಾಡಿದ್ದಾರಾ? ಹೋಗುವವರು ಹೋಗಲಿ ಅಂತ ಬಿಟ್ಟು ಬಿಡಬೇಕು.
ರಾಜಕೀಯದಲ್ಲಿ ಅವೆಲ್ಲ ಸಹಜ. ನಮ್ಮನ್ನೂ ಸುಮ್ಮನೆ ಬಿಟ್ಟುಬಿಡಿ. ನಮ್ಮ‌ಹಣೆ ಬರಹವನ್ನ ದೇವರೇ ಬರೆಯಬೇಕು,' ಎಂದು ಹೇಳಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಕುರ್ಚಿ ಗೊಂದಲದಿಂದಾಗಿ ರಾಜ್ಯದಲ್ಲಿ ಅಸ್ತಿರತೆ ಸೃಷ್ಟಿ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ
ಕಾಂಗ್ರೆಸ್ಸಿನಿಂದ ಉತ್ತರ ಕರ್ನಾಟಕಕ್ಕೆ ಹೆಚ್ಚು ಅನ್ಯಾಯ: ಸಂಸದ ಬೊಮ್ಮಾಯಿ