
ನವದೆಹಲಿ (ಜ.19): 19 ಮಂದಿ ಯೋಧರನ್ನು ಬಲಿಪಡೆದುಕೊಂಡ ಉರಿ ದಾಳಿಯ ಹಿಂದೆ ಜೈಶೆ ಮೊಹಮ್ಮದ್ ಕೈವಾಡವಿಲ್ಲ ಬದಲಾಗಿ ಲಷ್ಕರೆ ತೊಯ್ಬಾ ಕೈವಾಡವಿದೆಯೆಂದು ರಾಷ್ಟ್ರೀಯ ತನಿಖಾ ದಳ (ಎನ್’ಐಏ) ಹೇಳಿದೆ.
ಆದರೆ, ಇಬ್ಬರು ಸೇನಾ ಅಧಿಕಾರಿಗಳನ್ನು ಹಾಗೂ 5 ಯೋಧರನ್ನು ಬಲಿಪಡೆದ ನಾಗ್ರೋಟಾ ದಾಳಿಯ ಹಿಂದೆ ಜೈಶ್ ಕೈವಾಡವಿದೆ ಎಂದು ಎನ್’ಐಏ ಹೇಳಿದೆ.
ಉರಿ ದಾಳಿಯನ್ನು ಜೈಶ್ ಸಂಘಟನೆಯು ನಡೆಸಿದೆಯೆಂದು ಈ ಮುಂಚೆ ಆರೋಪಿಸಲಾಗಿತ್ತು.
ಕಳೆದ ವರ್ಷ ಸೆ.18ರ ನಸುಕಿನ ವೇಳೆ ಉರಿಯಲ್ಲಿದ್ದ ಸೇನಾ ಶಿಬಿರದ ಮೇಲೆ ನಾಲ್ಕು ಮಂದಿ ಉರರು ದಾಳಿ ನಡೆಸಿದ್ದರು. ದಾಳಿಯಲ್ಲಿ 19 ಮಂದಿ ಯೋಧರು ಹುತಾತ್ಮರಾಗಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.