
ಶ್ರೀನಗರ (ನ.25): ನ.21ರಂದು ನಡೆದ ಬ್ಯಾಂಕ್ ದರೋಡೆಗೆ ಸಂಬಂಧಿಸಿದಂತೆ ಜಮ್ಮು & ಕಾಶ್ಮೀರ ಪೊಲೀಸರು, ಪಾಕಿಸ್ತಾನ ಮೂಲದ ಲಷ್ಕರೆ ತೊಯಿಬಾ ಉಗ್ರ ಸಂಘಟನೆಯ 5 ಮಂದಿಯನ್ನು ಬಂಧಿಸಿದ್ದಾರೆ.
ಕಳೆದ ನ.21ರಂದು ಜಮ್ಮು & ಕಾಶ್ಮೀರ ಬ್ಯಾಂಕಿನ ಮಾಲ್ಪೋರಾ ಶಾಖೆಗೆ ನುಗ್ಗಿದ್ದ ಸಶಸ್ತ್ರಧಾರಿಗಳು ರೂ.14 ಲಕ್ಷ ನಗದನ್ನು ದರೋಡೆ ಮಾಡಿದ್ದರು.
ನಿಖರ ಸುಳಿವಿನ ಆಧಾರದಲ್ಲಿ ಪೊಲೀಸರು ಮಹಮ್ಮದ್ಇಕ್ಬಾಲ್ ವಾನಿಯನ್ನು ಮೊದಲು ಬಂಧಿಸಿದ್ದರು. ತನಿಖೆ ವೇಳೆ ಇತರ ನಾಲ್ಕು ಮಂದಿ ಬಗ್ಗೆ ಆತ ಬಾಯ್ಬಿಟ್ಟಿದ್ದು, ಈ ದರೋಡೆ ನಡೆಸಲು ಎಲ್ಇಟಿ ಯೋಜನ್ ರೂಪಿಸಿದ್ದು, ಅದಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನು ಅದು ಒದಗಿಸಿದೆ ಎಂದು ಹೇಳಿದ್ದಾನೆ.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.