ನಾಡ ಅಧಿದೇವತೆ ಗರ್ಭಗುಡಿಗೆ ನಾಲ್ಕು ಕೆಜಿ ತೂಕದ ಸ್ವರ್ಣ ದ್ವಾರ: ಭಕ್ತರ ಹುಬ್ಬೇರಿಸಿದೆ ಮಹಿಳೆಯ ದುಬಾರಿ ಹರಕೆ

Published : Oct 30, 2017, 10:18 AM ISTUpdated : Apr 11, 2018, 01:01 PM IST
ನಾಡ ಅಧಿದೇವತೆ ಗರ್ಭಗುಡಿಗೆ ನಾಲ್ಕು ಕೆಜಿ ತೂಕದ ಸ್ವರ್ಣ ದ್ವಾರ: ಭಕ್ತರ ಹುಬ್ಬೇರಿಸಿದೆ ಮಹಿಳೆಯ ದುಬಾರಿ ಹರಕೆ

ಸಾರಾಂಶ

ಇಷ್ಟಾರ್ಥಗಳನ್ನ ಈಡೇರಿಸಲಿ ಅಂತಾ ಜನ ದೇವರಲ್ಲಿ ಹರಕೆ ಹೊತ್ತಿಕೊಳ್ಳೋದು ಸಾಮಾನ್ಯ. ಇಷ್ಟಾರ್ಥ ನೆರವೇರಿದ ಬಳಿಕ ಭಕ್ತರು ಇಷ್ಟ ದೇವರಿಗೆ ಹರಕೆಯನ್ನು ಒಪ್ಪಿಸುತ್ತಾರೆ. ಇಲ್ಲೊಬ್ಬರು ಭಕ್ತರು ತಮ್ಮ ಇಷ್ಟಾರ್ಥಗಳನ್ನು ಈಡೇರಿಸಿದ್ದಕ್ಕೆ ನಾಡಿನ ಅಧಿದೇವತೆಗೆ ಭಾರೀ ಉಡುಗೊರೆಯನ್ನೇ ಹರಕೆ ರೂಪದಲ್ಲಿ ಸಲ್ಲಿಸಿದ್ದಾರೆ.

ಮೈಸೂರು(ಅ.30): ಚಿನ್ನದ ಬಾಗಿಲು ಒಂದಲ್ಲ, ಎರಡಲ್ಲ ನಾಲ್ಕು ಕೆಜಿ ಸ್ವರ್ಣ ದ್ವಾರ. ಕೋಟಿ ಮೌಲ್ಯದ ಬೆಲೆ ಬಾಳೋ ಚಿನ್ನದ ಬಾಗಿಲು ಈಗ ನಾಡ ಅಧಿದೇವತೆ ಚಾಮುಂಡಿ ಗರ್ಭಗುಡಿಯಲ್ಲಿ ಭಕ್ತರ ಕಣ್ಮನ ಸೆಳೆಯುತ್ತಿದೆ. ಅಂದ್ಹಾಗೇ ಇದು ಭಕ್ತರೊಬ್ಬರು ತಾಯಿಗೆ ಒಪ್ಪಿಸಿದ ಹರಕೆ. ಯೆಸ್, ಬೆಂಗಳೂರು ಮೂಲದ ವಕೀಲೆ ಜಯಶ್ರೀ ಶ್ರೀಧರ್ ಅನ್ನೋರು ಇಂಥದ್ದೊಂದು ದುಬಾರಿ ಹರಕೆ ತೀರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಎರಡು ವರ್ಷಗಳ ಹಿಂದೆ ಚಾಮುಂಡಿಬೆಟ್ಟಕ್ಕೆ ಬಂದಿದ್ದ ಜಯಶ್ರೀ ಶ್ರೀಧರ್ ಇಷ್ಟಾರ್ಥ ಪೂರೈಸಿದ್ರೆ ಚಿನ್ನದ ಬಾಗಿಲು ಸಮರ್ಪಿಸೋ ಹರಕೆ ಹೊತ್ತಿದ್ದರಂತೆ.. ಅದರಂತೆ ಈಗ ಗರ್ಭಗುಡಿಯ ದ್ವಾರಕ್ಕೆ ನವದುರ್ಗೆಯರಿರುವ ಚಿನ್ನದ ಪಟ್ಟಿ ಸಮರ್ಪಿಸಿ ಹರಕೆ ತೀರಿಸಿದ್ದಾರೆ.

ಭಕ್ತರು ಹರಕೆ ತೀರಿಸುತ್ತಾರೆ ಅನ್ನೋದನ್ನ ಕೇಳಿದ್ದೇವೆ. ಶಕ್ತ್ಯಾನುಸಾರ ಹರಕೆ ತೀರಿಸೋದನ್ನೂ ನೋಡಿದ್ದೇವೆ. ಆದ್ರೆ, ಚಾಮುಂಡಿ ತಾಯಿ ಭಕ್ತರೊಬ್ಬರು ಇಷ್ಟು ದೊಡ್ಡ ಮಟ್ಟದ ಹರಕೆಯನ್ನು ಒಪ್ಪಿಸಿದ್ದು ಭಕ್ತರ ಹುಬ್ಬೇರಿಸುವಂತೆ ಮಾಡಿದೆ.. ಜೊತೆಗೆ ಕೆಲ ಚರ್ಚೆಗಳನ್ನೂ ಹುಟ್ಟುಹಾಕಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ರಾಂಗ್‌ ಫ್ಲೈಟ್‌ ಹತ್ತಿದ್ದಾರೆ: ಸಿದ್ಧರಾಮಯ್ಯ ವಿರುದ್ಧ ಆರ್‌.ಅಶೋಕ್‌ ಗರಂ!
ನನ್ನ-ಸಿಎಂ ಸಿದ್ದರಾಮಯ್ಯ ನಡುವೆ ಒಪ್ಪಂದವಾಗಿದೆ: ಡಿ.ಕೆ.ಶಿವಕುಮಾರ್ ಹೇಳಿಕೆ ಹಾಟ್ ಟಾಪಿಕ್!