
ಮೈಸೂರು(ಅ.30): ಚಿನ್ನದ ಬಾಗಿಲು ಒಂದಲ್ಲ, ಎರಡಲ್ಲ ನಾಲ್ಕು ಕೆಜಿ ಸ್ವರ್ಣ ದ್ವಾರ. ಕೋಟಿ ಮೌಲ್ಯದ ಬೆಲೆ ಬಾಳೋ ಚಿನ್ನದ ಬಾಗಿಲು ಈಗ ನಾಡ ಅಧಿದೇವತೆ ಚಾಮುಂಡಿ ಗರ್ಭಗುಡಿಯಲ್ಲಿ ಭಕ್ತರ ಕಣ್ಮನ ಸೆಳೆಯುತ್ತಿದೆ. ಅಂದ್ಹಾಗೇ ಇದು ಭಕ್ತರೊಬ್ಬರು ತಾಯಿಗೆ ಒಪ್ಪಿಸಿದ ಹರಕೆ. ಯೆಸ್, ಬೆಂಗಳೂರು ಮೂಲದ ವಕೀಲೆ ಜಯಶ್ರೀ ಶ್ರೀಧರ್ ಅನ್ನೋರು ಇಂಥದ್ದೊಂದು ದುಬಾರಿ ಹರಕೆ ತೀರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.
ಎರಡು ವರ್ಷಗಳ ಹಿಂದೆ ಚಾಮುಂಡಿಬೆಟ್ಟಕ್ಕೆ ಬಂದಿದ್ದ ಜಯಶ್ರೀ ಶ್ರೀಧರ್ ಇಷ್ಟಾರ್ಥ ಪೂರೈಸಿದ್ರೆ ಚಿನ್ನದ ಬಾಗಿಲು ಸಮರ್ಪಿಸೋ ಹರಕೆ ಹೊತ್ತಿದ್ದರಂತೆ.. ಅದರಂತೆ ಈಗ ಗರ್ಭಗುಡಿಯ ದ್ವಾರಕ್ಕೆ ನವದುರ್ಗೆಯರಿರುವ ಚಿನ್ನದ ಪಟ್ಟಿ ಸಮರ್ಪಿಸಿ ಹರಕೆ ತೀರಿಸಿದ್ದಾರೆ.
ಭಕ್ತರು ಹರಕೆ ತೀರಿಸುತ್ತಾರೆ ಅನ್ನೋದನ್ನ ಕೇಳಿದ್ದೇವೆ. ಶಕ್ತ್ಯಾನುಸಾರ ಹರಕೆ ತೀರಿಸೋದನ್ನೂ ನೋಡಿದ್ದೇವೆ. ಆದ್ರೆ, ಚಾಮುಂಡಿ ತಾಯಿ ಭಕ್ತರೊಬ್ಬರು ಇಷ್ಟು ದೊಡ್ಡ ಮಟ್ಟದ ಹರಕೆಯನ್ನು ಒಪ್ಪಿಸಿದ್ದು ಭಕ್ತರ ಹುಬ್ಬೇರಿಸುವಂತೆ ಮಾಡಿದೆ.. ಜೊತೆಗೆ ಕೆಲ ಚರ್ಚೆಗಳನ್ನೂ ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.