
ತಿರುವನಂತಪುರಂ : ಕೇರಳದಲ್ಲಿ ಕಾನೂನು ವಿದ್ಯಾರ್ಥಿಯೋರ್ವಳು ತನ್ನ ಫೇಸ್’ಬುಕ್ ಪುಟದಲ್ಲಿ ಋತುಚಕ್ರದ ಬಗ್ಗೆ ಪದ್ಯವೊಂದನ್ನು ಬರೆದು ಹಾಕಿದ್ದಕ್ಕೆ ಬಲಪಂಥೀಯ ಸಂಘನೆಗಳು ಬೆದರಿಕೆ ಒಡ್ಡಿದ ಪ್ರಕರಣ ಕೇರಳದಲ್ಲಿ ನಡೆದಿದ್ದು, ಈ ಸಂಬಂಧ ಆಕೆ ದೂರು ದಾಖಲು ಮಾಡಿದ್ದಾಳೆ.
ಈ ಪದ್ಯ ಹಾಕಿದ್ದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಬೆದರಿಕೆ ಒಡ್ಡಲಾಗಿದೆ ಎಂದು ಆಕೆ ಹೇಳಿದ್ದಾರೆ. ಮಲ್ಲಪಲ್ಲಿಯ 18 ವರ್ಷದ ಯುವತಿ ನವಮಿ ರಾಮಚಂದ್ರನ್ ಈ ರೀತಿಯಾಗಿ ದೂರನ್ನು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿಯೇ ತನಗೆ ಬೆದರಿಕೆ ಒಡ್ಡಲಾಗಿದೆ ಎಂದು ಆಕೆ ಹೇಳಿದ್ದಾರೆ. ಈ ಪದ್ಯಕ್ಕೆ ಬೆಂಬಲ ನೀಡಿದ ಇನ್ನೋರ್ವ ವಿದ್ಯಾರ್ಥಿನಿಗೂ ಕೂಡ ಇದೇ ರೀತಿ ಬೆದರಿಕೆಯನ್ನು ಒಡ್ಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.