
ಪಟ್ನಾ (ಜು.07): ತಮ್ಮ ನಿವಾಸದ ಮೇಲೆ ಸಿಬಿಐ ದಾಳಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರಣ ಎಂದು ಲಾಲು ಪ್ರಸಾದ್ ಯಾದವ್ ಕಿಡಿ ಕಾರಿದ್ದಾರೆ.
ನಮ್ಮ ಪಕ್ಷದ ಮೈತ್ರಿಯೊಳಗೆ ಮೂಗು ತೂರಿಸಲು ಪ್ರಯತ್ನಿಸಿದ್ದಕ್ಕಾಗಿ ಭಾರತೀಯ ಜನತಾ ಪಕ್ಷವನ್ನೇ ಇಲ್ಲವಾಗಿಸಿ ಬಿಡುತ್ತೇನೆ. ಪ್ರಧಾನಿ ಮೋದಿಯವರ ಸೊಕ್ಕನ್ನು ಮುರಿಯಲು ನಾನು ಏನು ಬೇಕಾದರೂ ಮಾಡುತ್ತೇನೆ ಎಂದು ಲಾಲು ಸವಾಲು ಹಾಕಿದ್ದಾರೆ.
ಆರ್’ಜೆಡಿ ಮತ್ತು ಜೆಡಿಯು ಮೈತ್ರಿಯನ್ನು ಮುರಿಯಲು ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ. ನಮ್ಮ ಪಕ್ಷದ ಮೈತ್ರಿಯೊಳಗೆ ಮೂಗು ತೂರಿಸಲು ಪ್ರಯತ್ನಿಸಿದ್ದಕ್ಕಾಗಿ ಕೇಸರಿ ಪಕ್ಷವನ್ನೇ ಇಲ್ಲವಾಗಿಸಿ ಬಿಡುತ್ತೇವೆ. ನಾನು ನಿಮ್ಮನ್ನು (ಮೋದಿಯವರನ್ನು) ಬಿಹಾರದಿಂದ ಓಡಿಸಿದ್ದೇನೆ. ಕೇಳಿ, ಮೋದಿ ಹಾಗೂ ಅಮಿತ್ ಶಾ ಅವರೇ, ನಾನು ಮತ್ತು ಜನರು ಸೇರಿ ನಿಮ್ಮ ಸೊಕ್ಕನ್ನು ಮುರಿಯುತ್ತೇವೆ. ನನಗೆ ಗಲ್ಲುಶಿಕ್ಷೆಯಾದರೂ ಪರವಾಗಿಲ್ಲ, ನಿಮ್ಮ ಸೊಕ್ಕನ್ನು ಮುರಿದೇ ತೀರುತ್ತೇನೆ ಎಂದು ಲಾಲು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.