ಲಾಲು ಝಡ್ ಪ್ಲಸ್ ಭದ್ರತೆ ವಾಪಸ್ : ಮೋದಿ ವಿರುದ್ಧ ತೇಜ್ ಪ್ರತಾಪ್ ಅಸಮಾಧಾನ

Published : Nov 27, 2017, 06:15 PM ISTUpdated : Apr 11, 2018, 01:02 PM IST
ಲಾಲು ಝಡ್ ಪ್ಲಸ್ ಭದ್ರತೆ ವಾಪಸ್ : ಮೋದಿ ವಿರುದ್ಧ ತೇಜ್ ಪ್ರತಾಪ್ ಅಸಮಾಧಾನ

ಸಾರಾಂಶ

ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್'ಗೆ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಕೇಂದ್ರ ವಾಪಸ್ ಪಡೆದಿದೆ. ಇದರ ಬದಲಾಗಿ ಅವರಿಗೆ ಝಡ್ ಶ್ರೇಣಿಯ ಭದ್ರತೆಯನ್ನು  ನೀಡಲಾಗುತ್ತಿದೆ. ಎನ್'ಎಸ್'ಜಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡಿದ್ದು, ಸಿಆರ್'ಪಿಎಫ್ ಸಿಬ್ಬಂದಿ ಲಾಲೂ ರಕ್ಷಣೆಗೆ ಇರಲಿದ್ದಾರೆ.

ಹೊಸದಿಲ್ಲಿ(ನ.27): ಬಿಹಾರ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್'ಗೆ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನು ಕೇಂದ್ರ ವಾಪಸ್ ಪಡೆದಿದೆ. ಇದರ ಬದಲಾಗಿ ಅವರಿಗೆ ಝಡ್ ಶ್ರೇಣಿಯ ಭದ್ರತೆಯನ್ನು  ನೀಡಲಾಗುತ್ತಿದೆ. ಎನ್'ಎಸ್'ಜಿ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಂಡಿದ್ದು, ಸಿಆರ್'ಪಿಎಫ್ ಸಿಬ್ಬಂದಿ ಲಾಲೂ ರಕ್ಷಣೆಗೆ ಇರಲಿದ್ದಾರೆ. ಝಡ್ ಶ್ರೇಣಿಯ ಭದ್ರತೆಯಲ್ಲಿ  ರಾಜ್ಯ ಪೊಲೀಸ್ ಅಧಿಕಾರಿಗಳೂ ಕೂಡ ಇರಲಿದ್ದಾರೆ.

ಕೇಂದ್ರದ ಈ ನಿರ್ಧಾರಕ್ಕೆ ಲಾಲೂ ಪುತ್ರ ಹಾಗೂ ಬಿಹಾರದ ಸಚಿವರಾಗಿರುವ ತೇಜ್ ಪ್ರತಾಪ್'ರಿಂದ ಅಸಮಾಧಾನ ವ್ಯಕ್ತವಾಗಿದೆ. ಮುಂದೆ ಲಾಲು ಪ್ರಸಾದ್ ಅವರಿಗೆ ಯಾವುದೇ ಸಮಸ್ಯೆಯಾದರೂ ಅದಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರಣರಾಗಲಿದ್ದಾರೆ ಎಂದಿದ್ದಾರೆ. ತಮ್ಮ ತಂದೆಯ ವಿರುದ್ಧದ ಇದೊಂದು ಪಿತೂರಿ ಎಂದು ತೇಜ್ ಪ್ರತಾಪ್ ಆಕ್ರೋಶ ಹೊರಹಾಕಿದ್ದಾರೆ.

ಇದೇ ವೇಳೆ ಜಿತನ್ ರಾಂ ಮಾಂಜಿ ಅವರಿಗೆ ನೀಡಿದ್ದ ಝಡ್ ಪ್ಲಸ್ ಭದ್ರತೆಯನ್ನೂ ಕೂಡ ಕೇಂದ್ರದಿಂದ ವಾಪಸ್ ಪಡೆದುಕೊಳ್ಳಲಾಗಿದೆ. ಅದರ ಬದಲಿಗೆ ಅವರಿಗೆ ಸಿಆರ್'ಪಿಎಫ್'ಭದ್ರತೆ ಒದಗಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಾಮರಾಜನಗರ: ಲೋಕಾಯುಕ್ತ ದಾಳಿ, ವಾಹನ ಸವಾರನಿಂದ ಮೂರು ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಪೊಲೀಸಪ್ಪ!
ಇಡೀ ಥಿಯೇಟರ್‌ನಲ್ಲಿ ಒಂದು ಸೀಟು ಬಿಟ್ಟು ಮತ್ತೊಂದು ಸೀಟ್ ಬುಕ್‌: ಪ್ರೇಮಿಗಳ ದಿನಕ್ಕೆ ಪ್ರೇಮಿಗಳಿಗೆ ಸಿಂಗಲ್ಸ್‌ಗಳ ಶಾಕ್