
ಬೆಳಗಾವಿ[ಸೆ.22]: ಜಾರಿ ನಿರ್ದೇಶನಾಲಯ(ಇ.ಡಿ.)ದಿಂದ ವಿಚಾರಣೆ ಎದುರುಸುತ್ತಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನೆನೆದು ಅವರ ಪುತ್ರ ಮೃಣಾಲ್ ಕಣ್ಣೀರು ಹಾಕಿರುವ ಪ್ರಸಂಗ ಶನಿವಾರ ನಡೆದಿದೆ.
ಹೆಬ್ಬಾಳ್ಕರ್ ‘ಲಕ್ಷ್ಮೀ’ ಲೆಕ್ಕ ಕೇಳಿದ ಇಡಿ: ಬರ್ತಿನಿ ಬಿಡಿ ಎಂದ ನಾಯಕಿಯ ಪೊಟೋ ನೋಡಿ!
ಎಂತಹ ಕಷ್ಟದಲ್ಲಿಯೂ ನಗುಮುಖ ಹೊಂದಿದ್ದ ನನ್ನ ತಾಯಿ ಅನುಭವಿಸುತ್ತಿರುವ ಕಷ್ಟನೋಡಿ ಕಣ್ಣಲ್ಲಿ ನೀರು ಬರುತ್ತಿದೆ. ರಾತ್ರಿ ನಿದ್ದೆ ಬರುತ್ತಿಲ್ಲ ಎಂದು ಎಂದು ನೋವು ತೋಡಿಕೊಂಡಿದ್ದಾರೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಶನಿವಾರ ನಡೆದ ಕೆರೆ ಅಭಿವೃದ್ಧಿ ಚಾಲನಾ ಕಾರ್ಯಕ್ರಮದಲ್ಲಿ ಮಾತನಾಡಿ, ತಾಯಿಯ ಕಷ್ಟನೆನಪಿಸಿಕೊಂಡು ಭಾವುಕರಾದರು.
ಡಿಕೆಶಿಯಿಂದ ಲಕ್ಷ್ಮೀ ಹೆಬ್ಬಾಳ್ಕರ್ಗೆ ಹೋದ ಕೋಟಿ-ಕೋಟಿ ಹಣದ ರಹಸ್ಯ ಬಯಲು
ಎಂಥದ್ದೆ ಕಷ್ಟಬಂದರೂ ನನ್ನ ತಾಯಿಯ ಮುಖದಲ್ಲಿ ನಗು ಇರುತ್ತದೆ. ನನ್ನ ತಾಯಿಯ ಈ ಗುಣವನ್ನು ನಾವೆಲ್ಲರೂ ಕಲಿಯಬೇಕಿದೆ. ನಿಮಗೆ ಕೈಮುಗಿದು ಕೇಳುತ್ತೇನೆ, ನಿಮ್ಮ ಆಶೀರ್ವಾದ ನಮ್ಮ ತಾಯಿಯ ಮೇಲಿರಲಿ. ನಿಮ್ಮ ಆಶೀರ್ವಾದ ಇದ್ದಷ್ಟು ನಾವು ಕ್ಷೇತ್ರದ ಒಳ್ಳೆಯ ಕೆಲಸ ಮಾಡಲು ಸಾಧ್ಯ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.