ಕುಕ್ಕರ್ ಆಯ್ತು, ಈಗ ಲಕ್ಷ್ಮೀ ಹೆಬ್ಬಾಳ್ಕರ್’ರಿಂದ ಇಸ್ತ್ರಿಪೆಟ್ಟಿಗೆ ಗಿಫ್ಟ್!

Published : Feb 16, 2018, 10:50 AM ISTUpdated : Apr 11, 2018, 12:39 PM IST
ಕುಕ್ಕರ್ ಆಯ್ತು, ಈಗ ಲಕ್ಷ್ಮೀ ಹೆಬ್ಬಾಳ್ಕರ್’ರಿಂದ ಇಸ್ತ್ರಿಪೆಟ್ಟಿಗೆ ಗಿಫ್ಟ್!

ಸಾರಾಂಶ

ಇತ್ತೀಚೆಗಷ್ಟೇ ಮಹಿಳೆಯರಿಗೆ ಕುಕ್ಕರ್ ನೀಡಿ ವಿವಾದಕ್ಕೀಡಾಗಿದ್ದ  ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗ ಯುವಕರು, ರೈತರು, ಮಾಜಿ, ಹಾಲಿ ಯೋಧರು ಸೇರಿ 8  ಸಾವಿರಕ್ಕೂ ಹೆಚ್ಚು ಜನರಿಗೆ ಇಸ್ತ್ರಿ ಪೆಟ್ಟಿಗೆ ಉಡುಗೊರೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಬೆಳಗಾವಿ (ಫೆ.16): ಇತ್ತೀಚೆಗಷ್ಟೇ ಮಹಿಳೆಯರಿಗೆ ಕುಕ್ಕರ್ ನೀಡಿ ವಿವಾದಕ್ಕೀಡಾಗಿದ್ದ  ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗ ಯುವಕರು, ರೈತರು, ಮಾಜಿ, ಹಾಲಿ ಯೋಧರು ಸೇರಿ 8  ಸಾವಿರಕ್ಕೂ ಹೆಚ್ಚು ಜನರಿಗೆ ಇಸ್ತ್ರಿ ಪೆಟ್ಟಿಗೆ ಉಡುಗೊರೆ ನೀಡಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಹೆಬ್ಬಾಳ್ಕರ್ ಅವರು, ನಗರದ ಸಿಪಿಎಡ್ ಮೈದಾನದಲ್ಲಿ ಬುಧವಾರ ತಮ್ಮ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸೇನಾ ಮಾಜಿ, ಹಾಲಿ ಯೋಧರಿಗೆ ಹಾಗೂ ರೈತರಿಗೆ ಸನ್ಮಾನಿಸಿ, ಬಹಿರಂಗವಾ ಗಿಯೇ ಇಸ್ತ್ರಿಪೆಟ್ಟಿಗೆ ಗಿಫ್ಟ್ ನೀಡುವ ಮೂಲಕ ಆಮಿಷವೊಡ್ಡಿದ್ದಾರೆ. ಅಲ್ಲದೇ, ರಕ್ತದಾನ  ಶಿಬಿರದಲ್ಲಿ ಪಾಲ್ಗೊಂಡಿದ್ದ ೨ ಸಾವಿರ ಯುವಕರಿಗೂ ಇಸ್ತ್ರಿ ಪೆಟ್ಟಿಗೆ ಕಾಣಿಕೆ
ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇಸ್ತ್ರಿ ಪೆಟ್ಟಿಗೆ ಬಾಕ್ಸ್ ಮೇಲೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಭಾವಚಿತ್ರ ಮುದ್ರಿಸಿದ್ದು, ಸೇವಾ ಸನ್ಮಾನ ಪುರಸ್ಕಾರ ಎಂದೂ ಬರೆಯಲಾಗಿದೆ. ಸಮಾರಂಭದ ಬಳಿಕ ಊಟದ ವ್ಯವಸ್ಥೆಯೂ ಇತ್ತು ಎನ್ನಲಾಗಿದೆ.

ಇತ್ತೀಚೆಗಷ್ಟೇ ಅವರ ಪುತ್ರ ಮೃಣಾಲ್ ಹೆಬ್ಬಾಳ್ಕರ್ ಅವರು ಮಹಿಳೆಯರಿಗೆ ರಾತ್ರೋರಾತ್ರಿ ಕುಕ್ಕರ್‌ಗಳನ್ನು ನೀಡಿ, ತಮ್ಮ ತಾಯಿಗೆ ಮತ ಹಾಕುವಂತೆ ಕೈಮುಗಿಯುತ್ತಿದ್ದ ವಿಡಿಯೋ ವೈರಲ್ ಆಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಯಾಂಡಲ್‌ವುಡ್ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌ ಹಾಕಿದ್ದ ಅಕ್ರಮ ಕಾಂಪೌಂಡ್ ತೆರವು
'ಕೊರಗಜ್ಜ' ಸಿನಿಮಾ ತಂಡದ ವಿರುದ್ಧ ರೊಚ್ಚಿಗೆದ್ದ ಕೊಡಗಿನ ದೈವಾರಾಧಕರು, ನರ್ತಕರು; ಯಾಕೆ ಹೀಗಾಯ್ತು?