ಯಾಗಕ್ಕೆ ಕುಳಿತ ಈಶ್ವರಪ್ಪ: ತೊಂದರೆ ನಿವಾರಣೆಯ ಪೂಜೆಯಲ್ಲಿ ಬಿಜೆಪಿ ಅತೃಪ್ತರು

Published : Apr 28, 2017, 02:52 PM ISTUpdated : Apr 11, 2018, 12:38 PM IST
ಯಾಗಕ್ಕೆ ಕುಳಿತ ಈಶ್ವರಪ್ಪ: ತೊಂದರೆ ನಿವಾರಣೆಯ ಪೂಜೆಯಲ್ಲಿ ಬಿಜೆಪಿ ಅತೃಪ್ತರು

ಸಾರಾಂಶ

ಈಶ್ವರಪ್ಪ ಕುಟುಂಬ ಸಮೇತರಾಗಿ ನಡೆಸಿದ ಈ ನಾಗಬ್ರಹ್ಮನನನ್ನು ಸಂತೃಪ್ತಿ ಪಡಿಸಿ ತಮಗೆ ಅಥವಾ ತಮ್ಮ ಕುಟುಂಬಕ್ಕೆ ಆಗುವ ವೈಯಕ್ತಿಕ ತೊಂದರೆಯನ್ನು ನಿವಾರಿಸುವ ಸಂಬಂಧ ಈ ಆಶ್ಲೇಷಾ ಬಲಿಯ ವಿಶೇಷ ಪೂಜೆ ಕೈಗೊಂಡರು.

ಶಿವಮೊಗ್ಗ(ಏ.28): ಬೆಂಗಳೂರಿನಲ್ಲಿ ಬಿಜೆಪಿ ಅತೃಪ್ತರ ಸಭೆ ನಡೆಸಿ ಬಿಜೆಪಿಯಲ್ಲಿ ಅಸಮಾಧಾನ ಹೊಗೆ ಭುಗಿಲೇಳುವಂತೆ ಮಾಡಿ ತವರು ಶಿವಮೊಗ್ಗಕ್ಕೆ ವಾಪಾಸಾಗಿದ್ದ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಮನೆಯಲ್ಲಿ ಆಶ್ಲೇಷಾ ಬಲಿ ಪೂಜೆ ನಡೆಸಿ ಗಮನ ಸೆಳೆದರು.

ಈಶ್ವರಪ್ಪ ಕುಟುಂಬ ಸಮೇತರಾಗಿ ನಡೆಸಿದ ಈ ನಾಗಬ್ರಹ್ಮನನನ್ನು ಸಂತೃಪ್ತಿ ಪಡಿಸಿ ತಮಗೆ ಅಥವಾ ತಮ್ಮ ಕುಟುಂಬಕ್ಕೆ ಆಗುವ ವೈಯಕ್ತಿಕ ತೊಂದರೆಯನ್ನು ನಿವಾರಿಸುವ ಸಂಬಂಧ ಈ ಆಶ್ಲೇಷಾ ಬಲಿಯ ವಿಶೇಷ ಪೂಜೆ ಕೈಗೊಂಡರು. ನಾಡಿನಲ್ಲಿ ಒಳ್ಳೆಯದಾಗಲಿ ಎಂದು ಈ ಪೂಜೆ ನಡೆಸಿದ್ದಾಗಿ ಹೇಳಿದರಾದರೂ ಈ ಪೂಜೆಯಲ್ಲಿ ಅತೃಪ್ತರ ಸಭೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡರಾದ ಮಾಜಿ ಸೂಡಾ ಅಧ್ಯಕ್ಷ ದತ್ತಾತ್ರೀ , ಮಾಜಿ ಕ್ರೀಡಾ ಪ್ರಾಧಿಕಾರದ ಅಧ್ಯಕ್ಷ ಗಿರೀಶ್ ಪಟೇಲ್ , ಎಂಎಲ್'ಸಿ ಎಂ.ಬಿ. ಭಾನುಪ್ರಕಾಶ್, ಸಂಗೊಳ್ಳಿ ರಾಯಣ್ಣ ಬಿಗ್ರೇಡ್ ರಾಜ್ಯಾಧ್ಯಕ್ಷ ವಿರೂಪಾಕ್ಷಪ್ಪ ಮೊದಲಾದವರು ಪೂಜೆಯಲ್ಲಿ ಪಾಲ್ಗೊಂಡು ನಂತರ ಊಟವನ್ನು ಮಾಡಿದರು.

ಪುರೋಹಿತರ ಪ್ರಕಾರ ಈ ಪೂಜೆಗೆ ರಾಜಕೀಯ ಮಹತ್ವ ಇಲ್ಲ, ಪೂಜೆಯನ್ನು ಸಂತಾನ ಬಯಸಿ , ಕಂಕಣ ಬಲಕ್ಕಾಗಿ , ಸರ್ಪದೋಷವಿದ್ದರೇ, ವೈಯಕ್ತಿಕ ಅನಾನುಕೂಲಗಳಿದ್ದರೇ ಮಾತ್ರ ಇಂತಹ ಪೂಜೆಗಳಿಂದ ಫಲ ಸಿಗಲಿದೆ ಎನ್ನುತ್ತಾರೆ. ಆದರೆ ಆಶ್ಲೇಷಾ ಬಲಿ ಪೂಜೆಯಲ್ಲಿ ಬಿಗ್ರೆಡ್ ಮುಖಂಡರು, ಅತೃಪ್ತ ಬಿಜೆಪಿ ನಾಯಕರು ಭಾಗವಹಿಸುವ ಮೂಲಕ ರಾಜಕೀಯವಾಗಿ ಕುತೂಹಲ ಕೆರಳಿಸಿದೆ.     

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್