ಬಿಜೆಪಿ ನಾಯಕರ ವಿರುದ್ಧ ಮತ್ತೆ ಈಶ್ವರಪ್ಪ ಮುನಿಸು..?

Published : May 29, 2018, 12:45 PM IST
ಬಿಜೆಪಿ ನಾಯಕರ ವಿರುದ್ಧ ಮತ್ತೆ ಈಶ್ವರಪ್ಪ ಮುನಿಸು..?

ಸಾರಾಂಶ

ಬಿಜೆಪಿ ಮುಖಂಡ ಈಶ್ವರಪ್ಪ ಹಾಗೂ ಬಿಜೆಪಿ ನಾಯಕರ ನಡುವಿನ ಮುನಿಸು ಮತ್ತೆ ಸ್ಫೋಟಗೊಂಡಿದೆ. ಇದೀಗ  ಎಂಎಲ್ ಸಿ ಆಯ್ಕೆ ವಿಚಾರದಲ್ಲಿ ಪಕ್ಷದಲ್ಲಿ ಈಶ್ವರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಅಸಮಾಧಾನಗೊಂಡ ಅವರು ಇಂದು ನಡೆಯುವ ಪಕ್ಷದ ಕೋರ್ ಕಮಿಟಿ ಸಭೆಗೆ ಗೈರು ಹಾಜರಾಗಲಿದ್ದಾರೆ ಎನ್ನಲಾಗಿದೆ. 

ಬೆಂಗಳೂರು : ಬಿಜೆಪಿ ಮುಖಂಡ ಈಶ್ವರಪ್ಪ ಹಾಗೂ ಬಿಜೆಪಿ ನಾಯಕರ ನಡುವಿನ ಮುನಿಸು ಮತ್ತೆ ಸ್ಫೋಟಗೊಂಡಿದೆ. ಇದೀಗ  ಎಂಎಲ್ ಸಿ ಆಯ್ಕೆ ವಿಚಾರದಲ್ಲಿ ಪಕ್ಷದಲ್ಲಿ ಈಶ್ವರಪ್ಪ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಕಾರಣ ಅಸಮಾಧಾನಗೊಂಡ ಅವರು ಇಂದು ನಡೆಯುವ ಪಕ್ಷದ ಕೋರ್ ಕಮಿಟಿ ಸಭೆಗೆ ಗೈರು ಹಾಜರಾಗಲಿದ್ದಾರೆ ಎನ್ನಲಾಗಿದೆ. 

ಎಂಎಲ್ ಸಿಯಾಗಿ ಭಾನುಪ್ರಕಾಶ್ ಮರು ಆಯ್ಕೆಗೆ ಈಶ್ವರಪ್ಪ ಒಲವು ತೋರಿದ್ದು, ಆದರೆ ಭಾನುಪ್ರಕಾಶ್ ಬದಲಿಗೆ ವಕ್ತಾರ ವಾಮನಾಚಾರ್ಯ, ಗೋಮಧುಸೂದನ್, ಅಥವಾ ಸುಬ್ಬ ನರಸಿಂಹ ಅವರನ್ನು ಆಯ್ಕೆ ಮಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಒಲವು ತೋರಿದ್ದಾರೆ ಎನ್ನಲಾಗಿದೆ.  

ಜೂನ್ 15ಕ್ಕೆ ಭಾನುಪ್ರಕಾಶ್ ಅವಧಿ ಮುಕ್ತಾಯವಾಗಲಿದ್ದು, ಭಾನುಪ್ರಕಾಶ್ ಈಶ್ವರಪ್ಪ  ಆಪ್ತರಾಗಿದ್ದಾರೆ.  ಸಂಗ್ಗೊಳ್ಳಿ ರಾಯಣ್ಣ ಬ್ರಿಗೇಡ್ ಚಾಲ್ತಿಯಲ್ಲಿದ್ದಾಗ ಈಶ್ವರಪ್ಪಗೆ ಭಾನುಪ್ರಕಾಶ್ ಸಾಥ್ ನೀಡಿದ್ದು, ಭಾನುಪ್ರಕಾಶ್ ನಡೆಗೆ ಅಂದು  ಯಡಿಯೂರಪ್ಪ ಇರುಸು ಮುರುಸುಗೊಂಡಿದ್ದರು. ಆದ್ದರಿಂದಲೇ ಭಾನುಪ್ರಕಾಶ್ ಮರು ಆಯ್ಕೆ ಮಾಡಲು ಬಿಎಸ್'ವೈಗೆ ಆಸಕ್ತಿ ಇಲ್ಲದ ಕಾರಣ  ಈಶ್ವರಪ್ಪ ಇಂದು ಬಿಜೆಪಿ ಕೋರ್ ಸಭೆಗೆ ಗೈರಾಗುತ್ತಿದ್ದಾರೆ ಎನ್ನಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮನೆಗೆ ಮರಳುತ್ತಿದ್ದ ವೈದ್ಯೆ ಹಿಂಬಾಲಿಸಿ ಕಿರುಕುಳ, ಬೆಂಗಳೂರಲ್ಲಿ ತಡರಾತ್ರಿ ಬೆಚ್ಚಿ ಬೀಳಿಸಿದ ಘಟನೆ
ಔಷಧಿ ಖರೀದಿ ಟೆಂಡರ್‌ ತನಿಖೆಗೆ ತಜ್ಞರ ಸಮಿತಿ: ಸಚಿವ ಶರಣ ಪ್ರಕಾಶ್‌ ಪಾಟೀಲ್‌