ಕೆಆರ್’ಎಸ್ ನೀರಿನ ಮಟ್ಟ ಏರಿಕೆ; ರೈತರಲ್ಲಿ ಮೂಡಿದೆ ಸಂತಸ

First Published May 28, 2018, 3:49 PM IST
Highlights

ಸಕ್ಕರೆ ನಾಡು ಮಂಡ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು ಕೆಆರ್’ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.   ಮಳೆಯ ಅಭಾವದಿಂದ ನೀರಿನ ಮಟ್ಟ 67 ಅಡಿಗೆ ಕುಸಿದಿತ್ತು.  ಬೆಳೆಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದರು.   

ಮಂಡ್ಯ (ಮೇ. 28): ಸಕ್ಕರೆ ನಾಡು ಮಂಡ್ಯದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸತತ ಮಳೆ ಸುರಿಯುತ್ತಿದ್ದು ಕೆಆರ್’ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ. ಮಳೆಯ ಅಭಾವದಿಂದ ನೀರಿನ ಮಟ್ಟ 67 ಅಡಿಗೆ ಕುಸಿದಿತ್ತು.  ಬೆಳೆಗೆ ನೀರಿಲ್ಲದೆ ರೈತರು ಕಂಗಾಲಾಗಿದ್ದರು.  

ನಾಲ್ಕೈದು ದಿನಗಳಿಂದ ಸತತ ಮಳೆಯಾಗುತ್ತಿದ್ದು ಜಲಾಶಯದ ನೀರಿನ ಮಟ್ಟ ಏರಿಕೆಯಾಗಿದೆ. ಕಾವೇರಿ ಕಣಿವೆ ರೈತರ ಮೊಗದಲ್ಲಿ ಸಂತಸ ಮೂಡಿದೆ. 

ಕೆ.ಆರ್.ಎಸ್. ಜಲಾಶಯದ ಗರಿಷ್ಟ ನೀರಿನ ಮಟ್ಟ 124.80 ಅಡಿ. 

ಪ್ರಸ್ತುತ ಜಲಾಶಯದ ನೀರಿ‌ನ ಮಟ್ಟ 73.35 ಅಡಿ

ಜಲಾಶಯದ ಒಳ ಹರಿವು : 3370 ಕ್ಯೂಸೆಕ್ಸ್

ಜಲಾಶಯದ ಹೊರ ಹರಿವು : 348 ಕ್ಯೂಸೆಕ್ಸ್

ಜಲಾಶಯದಲ್ಲಿ ಲಭ್ಯವಿರುವ ನೀರಿನ ಪ್ರಮಾಣ:7.774 

 

click me!