
ತುಮಕೂರು (ಫೆ. 17): ಪ್ರಧಾನಿ ಮೋದಿ ನಾಳೆ ಮೈಸೂರಿಗೆ ಬರ್ತಾರೆ ಅದೇನು ಸುಳ್ಳು ಹೇಳುತ್ತಾರೋ ಗೊತ್ತಿಲ್ಲ. ಶೇ. 10 ರಷ್ಟು ಸರ್ಕಾರ ಅಂತಾರೆ. ನಾವು ಯಾವ ಯೋಜನೆಯಲ್ಲಿ ಎಷ್ಟು ದುಡ್ಡು ಹೊಡೆದಿದ್ದೇವೆ ಎಂದು ನಾಳೆ ಮೈಸೂರಿನಲ್ಲಿ ಅವರು ಬಹಿರಂಗಪಡಿಸಲಿ. ಇಲ್ಲದಿದ್ರೆ ಈ ದೇಶದ ಪ್ರಧಾನಿ ಸುಳ್ಳುಗಾರ ಅಂತಾ ಹೇಳಬೇಕಾಗುತ್ತೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಮೋದಿ 2 ಕೋಟಿ ಉದ್ಯೋಗ ಕೊಡಿಸ್ತೀನಿ ಎಂದಿದ್ದರು. ಬರಿ 4 ಲಕ್ಷ ಉದ್ಯೋಗ ಸಾಧ್ಯವಾಯ್ತು. ಮಜ್ಜಿಗೆ ಕುಡಿದ್ರು 18 ಪರ್ಸೆಂಟ್ ಟ್ಯಾಕ್ಸ್ ಕಟ್ಟಬೇಕು. ಜಿಎಸ್ ಟಿಯಿಂದ ಜನರ ಬದುಕು ದುರ್ಬರವಾಗಿದೆ. ವಿದೇಶಕ್ಕೆ ಮೋದಿ ಹೋದಾಗ ಅಲ್ಲಿನ ಭಾರತೀಯ ಡಾಕ್ಟರ್, ಇಂಜಿನಿಯರ್ಗಳು ಮೋದಿ ಅವರಿಗೆ ಸ್ವಾಗತ ಮಾಡಿದ್ರು. ಅವರು ಕಾಂಗ್ರೆಸ್'ನವರು ತಯಾರು ಮಾಡಿ ಕಳುಹಿಸಿದ ಡಾಕ್ಟರ್, ಇಂಜಿನಿಯರ್'ಗಳು. ಅದು ಮೋದಿಗೆ ಅರಿವಿರಲಿ ಎಂದು ಟೀಕಿಸಿದ್ದಾರೆ.
ಕಾಮಗಾರಿ ಗುತ್ತಿಗೆಯಲ್ಲೂ ಪರಿಶಿಷ್ಟ ಜಾತಿಗೆ ಮೀಸಲಾತಿ ಕೊಟ್ಟಿದ್ದೇವೆ. ಆದರೂ ಅವರು ನಮಗೇ ಏನೂ ಮಾಡಿಲ್ಲ ಅಂತಾರೆ. ಅದು ನನಗೆ ಅರ್ಥವಾಗ್ತಾ ಇಲ್ಲ ಎಂದು ಪರಂ ಬೇಸರ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.