ನೀರವ್​ ಮೋದಿ, ಮಲ್ಯಗೆ ಕೋಟಿ ಕೋಟಿ ದುಡ್ಡು ಕೊಡ್ತಾರೆ..! ರೈತ ದುಡ್ಡು ಕಟ್ಟದೇ ಹೋದ್ರೆ ಮನೆ ಒಡಿತಾರೆ; ಏನ್ ಸ್ವಾಮಿ ಇದು?

Published : Mar 15, 2018, 11:30 AM ISTUpdated : Apr 11, 2018, 12:51 PM IST
ನೀರವ್​ ಮೋದಿ, ಮಲ್ಯಗೆ ಕೋಟಿ ಕೋಟಿ ದುಡ್ಡು ಕೊಡ್ತಾರೆ..! ರೈತ ದುಡ್ಡು ಕಟ್ಟದೇ ಹೋದ್ರೆ ಮನೆ ಒಡಿತಾರೆ; ಏನ್ ಸ್ವಾಮಿ ಇದು?

ಸಾರಾಂಶ

ಬ್ಯಾಂಕ್  ಸಾಲ ಮರು ಪಾವತಿಸದೇ ಇರುವುದಕ್ಕೆ  ರೈತನ ಮನೆಗೆ ಬೀಗ ಮುರಿದು ಲೂಟಿ ಮಾಡಿರುವ ಘಟನೆ ಕಾರಟಗಿ ಪಟ್ಟಣದಲ್ಲಿ ನಡೆದಿದೆ. 

ಕೊಪ್ಪಳ (ಮಾ. 15):  ಬ್ಯಾಂಕ್  ಸಾಲ ಮರು ಪಾವತಿಸದೇ ಇರುವುದಕ್ಕೆ  ರೈತನ ಮನೆಗೆ ಬೀಗ ಮುರಿದು ಲೂಟಿ ಮಾಡಿರುವ ಘಟನೆ ಕಾರಟಗಿ ಪಟ್ಟಣದಲ್ಲಿ ನಡೆದಿದೆ.  ರೈತ ಮನೆಯಲ್ಲಿ ಇಲ್ಲದಿರುವಾಗ ಮನೆ ಬೀಗ ಮುರಿದು ರೈತನ ಮನೆಯಲ್ಲಿದ್ದ ಬಂಗಾರದ ಆಭರಣಗಳನ್ನು  ಬ್ಯಾಂಕ್​​ ಸಿಬ್ಬಂದಿ ಲೂಟಿ ಮಾಡಿದ್ದಾರೆ. 

ಬ್ಯಾಂಕ್​ ಸಿಬ್ಬಂದಿಯ ಹಗಲು ದರೋಡೆಗೆ ರೈತ ವಿಷ್ಣುವರ್ದನ್​ ರೆಡ್ಡಿ ಕಂಗಾಲಾಗಿದ್ದಾರೆ.  ಸುಕೋ ಬ್ಯಾಂಕ್​​’​​ನಲ್ಲಿ ವಿಷ್ನುವರ್ಧನ್ ರೆಡ್ಡಿ  7 ವರ್ಷದ ಹಿಂದೆ 3 ಲಕ್ಷ ರೂ ಸಾಲ ಮಾಡಿದ್ದರು. ಆದರೆ ಸಾಲ ಮರುಪಾವತಿ ಮಾಡಲು ವಿಷ್ಣವರ್ಧನ್ ರೆಡ್ಡಿಗೆ ಆಗಿರಲಿಲ್ಲ. ಇದರಿಂದ  ವಿಷ್ಣುವರ್ಧನರೆಡ್ಡಿ ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿದ ಬ್ಯಾಂಕಿನವರು ಮನೆ ಬೀಗ ಮುರಿದು ಮನೆಯಲ್ಲಿದ್ದ ಬಂಗಾರದ ಆಭರಣಗಳು ಸಮೇತ ವಸ್ತುಗಳನ್ನು ತೆಗದುಕೊಂಡು ಮನೆಯನ್ನು ಜಪ್ತಿ ಮಾಡಿದ್ದಾರೆ.

ಇದರಿಂದ  ಆಕ್ರೋಶಗೊಂಡ ವಿಷ್ಣುವರ್ಧನರೆಡ್ಡಿ, ನಮ್ಮ ಕುಟುಂಬ ಮನೆಯಲ್ಲಿದ್ದಾಗ ಕೋರ್ಟ್ ಆದೇಶ ತೆಗೆದುಕೊಂಡು ಬಂದು ಮನೆಯನ್ನು ಜಪ್ತಿ ಮಾಡಬಹುದಿತ್ತು. ಆದರೆ ಇದೀಗ ಯಾವುದೇ ಕೊರ್ಟ್ ಆದೇಶ ತರದೇ ನಾನು ಮನೆಯಲ್ಲಿ ಇಲ್ಲದನ್ನು ಗಮನಿಸಿ ಸಾಲಕ್ಕಿಂತ ಹೆಚ್ಚು ಬೆಲೆಬಾಳುವ ಆಭರಣಗಳನ್ನು ಬ್ಯಾಂಕಿನವರು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವ್ಯವಹಾರದ ಬಗ್ಗೆ ಮಾತನಾಡುತ್ತಿದ್ದಾಗಲೇ ಉದ್ಯಮಿಗೆ ಹಠಾತ್ ಹೃದಯಾಘಾತ: ಸಿಪಿಆರ್ ಮಾಡಿ ಜೀವ ಉಳಿಸಿದ ಯುವಕ
ಮಾಟ ಮಂತ್ರ ಪರಿಹಾರದ ನಾಟಕ: ಮಲ್ಲೇಶ್ವರಂನಲ್ಲಿ ಚಿನ್ನಾಭರಣ ದೋಚಿದ ನಕಲಿ ಸ್ವಾಮಿಗಳು!