
ಬೆಂಗಳೂರು (ಮಾ. 15): ಲಿಂಗಾಯಿತ ಧರ್ಮ ವಿಚಾರವಾಗಿ ದಿಂಗಾಲೇಶ್ವರ ಸ್ವಾಮೀಜಿಗಳು ಸಿಎಂರನ್ನು ಭೇಟಿ ಮಾಡಿದ್ದಾರೆ.
ವೀರಶೈವ-ಲಿಂಗಾಯತ ಅನ್ನೋದು ಎರಡು ಒಂದೇ. ವೀರಶೈವ ಲಿಂಗಾಯತ ಇಬ್ಬರು ಒಬ್ಬರೇ. ತಜ್ಞರ ಸಮಿತಿಯೇ ಸರಿಯಾಗಿ ರಚನೆ ಆಗಿಲ್ಲ. ಸರ್ಕಾರ ಸಮಿತಿಯ ಶಿಫಾರಸ್ಸು ತಿರಸ್ಕಾರ ಮಾಡಬೇಕು. ಅವಶ್ಯಕತೆ ಇದ್ರೆ ಮತ್ತೊಂದು ಸಮಿತಿ ಮಾಡಿ. ಎರಡು ಕಡೆಯ ಮುಖಂಡರನ್ನು ಈ ಸಮಿತಿಗೆ ಸೇರಿಸಿಕೊಳ್ಳಿ ಅಂತ ಮನವಿ ಮಾಡಿದ್ದೇವೆ ಎಂದು ಸ್ವಾಮೀಜಿ ಹೇಳಿದ್ದಾರೆ.
ಸಿಎಂ ಕೂಡಾ ಧರ್ಮದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಅಂತ ಹೇಳಿದ್ದಾರೆ. ಒಂದು ವೇಳೆ ಸಮಿತಿ ಶಿಫಾರಸ್ಸು ಅಂಗೀಕಾರ ಮಾಡಿದ್ರೆ ಹೋರಾಟ ಮಾಡ್ತೀವಿ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. 3000 ಸಾಮೀಜಿಗಳ ಪೈಕಿ 50 ಮಠಾಧೀಶರು ಮಾತ್ರ ಧರ್ಮ ಒಡೆಯಲು ಮುಂದಾಗಿದ್ದಾರೆ. ಮಿಕ್ಕ ಮಠಾಧೀಶರು ನಮ್ಮ ಧರ್ಮ ಒಡೆಯಬಾರದು ಅಂತ ಹೇಳಿದ್ದಾರೆ. ಸಮಿತಿ ಶಿಫಾರಸ್ಸು ಅಂಗೀಕಾರ ಮಾಡಿದ್ರೆ ಸ್ವಾಮೀಜಿಗಳು ಹೋರಾಟ ಮಾಡೋದು ಗ್ಯಾರಂಟಿ ಎಂದು ಸಿಎಂ ಸಿದ್ದರಾಮಯ್ಯಗೆ ದಿಂಗಾಲೇಶ್ಚರ ಸ್ವಾಮೀಜಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.