ವಿತ್ತ ಸಚಿವ ಅರುಣ್ ಜೇಟ್ಲಿ 2018-19ನೇ ಸಾಲಿನ ಬಜೆಟ್ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಕೃಷಿ, ಆರೋಗ್ಯ, ಶಿಕ್ಷಣ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಜೇಟ್ಲಿ ಆಯವ್ಯಯ ಪತ್ರವನ್ನು ಮಂಡಿಸಿದ್ದಾರೆ. ಈ ಬಜೆಟ್'ನಲ್ಲಿ ಗಮನ ಸೆಳೆದ ಆಯ್ದ ಅಂಶಗಳೆಂದರೆ...
ವಿತ್ತ ಸಚಿವ ಅರುಣ್ ಜೇಟ್ಲಿ 2018-19ನೇ ಸಾಲಿನ ಬಜೆಟ್ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಕೃಷಿ, ಆರೋಗ್ಯ, ಶಿಕ್ಷಣ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಜೇಟ್ಲಿ ಆಯವ್ಯಯ ಪತ್ರವನ್ನು ಮಂಡಿಸಿದ್ದಾರೆ. ಈ ಬಜೆಟ್'ನಲ್ಲಿ ಗಮನ ಸೆಳೆದ ಆಯ್ದ ಅಂಶಗಳೆಂದರೆ...
* ಮೋದಿ ಹೆಲ್ತ್ ಸ್ಕೀಂನಿಂದ ದೇಶದ 10 ಕೋಟಿಗೂ ಅಧಿಕ ಕುಟುಂಬಕ್ಕೆ ಅನುಕೂಲ.
* ಮೊಬೈಲ್ ಫೋನ್'ಗಳ ಮೇಲಿನ ಆಮದು ಸುಂಕ ಶೇ.20% ಹೆಚ್ಚಿಸಿರುವುದರಿಂದ ಮೊಬೈಲ್'ಗಳು ದುಬಾರಿಯಾಗಲಿವೆ.
* ಆರೋಗ್ಯ ಹಾಗೂ ಶಿಕ್ಷಣದ ಮೇಲಿನ ಸೆಸ್ 4% ಗೆ ಹೆಚ್ಚಿಸಲಾಗಿದೆ.
* ವಾರ್ಷಿಕ 250 ಕೋಟಿಗೂ ಅಧಿಕ ವ್ಯವಹಾರ ನಡೆಸುವ ಕಂಪನಿಗಳಿಗೆ 25% ತೆರಿಗೆ ವಿಧಿಸಲಾಗಿದೆ.
* ಗ್ರಾಮೀಣ ಪ್ರದೇಶದಲ್ಲಿ ಸುಲಭವಾಗಿ ಇಂಟರ್'ನೆಟ್ ಅವಕಾಶ ಕಲ್ಪಿಸುವ ಉದ್ದೇಶದಿಂದ 5 ಲಕ್ಷ ವೈಫೈ ಹಾಟ್'ಸ್ಪಾಟ್ ನಿರ್ಮಿಸಿಲು ಯೋಜಿಸಲಾಗಿದೆ.
* 2019ರೊಳಗಾಗಿ 4 ಲಕ್ಷ ಕಿ.ಮೀ ರೈಲ್ವೇ ಟ್ರ್ಯಾಕ್ ನಿರ್ಮಿಸುವ ಗುರಿ
* ಜನ್ ಧನ್ ಯೋಜನೆಯಡಿ 60 ಕೋಟಿ ಬ್ಯಾಂಕ್ ಅಕೌಟ್ ಮಾಡಿಸುವ ಗುರಿಯನ್ನು ಸರ್ಕಾರ ಹೊಂದಿದೆ.
* ಮುದ್ರಾ ಯೋಜನೆಯಡಿ 3 ಲಕ್ಷ ಕೋಟಿ ಸಾಲ ನೀಡುವ ಗುರಿ
* 2022ರ ವೇಳೆಗೆ ದೇಶದ ಎಲ್ಲ ಬಡವರಿಗೆ ಮನೆ ನಿರ್ಮಾಣದ ಪ್ರತಿಜ್ಞೆ
* ಉಜ್ವಲ ಯೋಜನೆಯಡಿ ಗ್ರಾಮೀಣ ಪ್ರದೇಶದ 8 ಕೋಟಿ ಮಹಿಳೆಯರ ಮನೆಗೆ LPG ಸಂಪರ್ಕ ಕಲ್ಪಿಸುವ ಗುರಿ.
* 70 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿಯನ್ನು ಘೋಷಣೆ ಮಾಡಿದ ಜೇಟ್ಲಿ.
* 500 ನಗರಗಳಿಗೆ ಕುಡಿಯುವ ನೀರು ಪೂರೈಕೆಗೆ ಅಮೃತ್ ಯೋಜನೆ