ಬಂಡೀಪುರ ರಾತ್ರಿ ಸಂಚಾರಕ್ಕೆ ಮತ್ತೆ ಕೇರಳ ಸರ್ಕಾರ ಕ್ಯಾತೆ!

Published : Aug 25, 2019, 11:05 AM IST
ಬಂಡೀಪುರ ರಾತ್ರಿ ಸಂಚಾರಕ್ಕೆ ಮತ್ತೆ ಕೇರಳ ಸರ್ಕಾರ ಕ್ಯಾತೆ!

ಸಾರಾಂಶ

ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ಪುನಾರಂಭ ಪರ ಭರ್ಜರಿ ಲಾಬಿ ನಡೆಸಿ ವಿಫಲವಾಗಿರುವ ಕೇರಳ ಈಗ ಮತ್ತೊಂದು ಪ್ರಸ್ತಾವ ಇಟ್ಟಿದೆ. ಕರ್ನಾಟಕದ ಮೈಸೂರು ಹಾಗೂ ಕೇರಳದ ವಯನಾಡು ಜಿಲ್ಲೆಗಳನ್ನು ಬೆಸೆಯುವ ಬಂಡೀಪುರದಲ್ಲಿ ಎಲೆವೇಟೆಡ್‌ ಹೆದ್ದಾರಿ ನಿರ್ಮಾಣ ಪ್ರಸ್ತಾಪವನ್ನು ಮತ್ತೆ ಮಂಡಿಸಿದೆ. 

ತಿರುವನಂತಪುರಂ (ಆ. 25): ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರ ಪುನಾರಂಭ ಪರ ಭರ್ಜರಿ ಲಾಬಿ ನಡೆಸಿ ವಿಫಲವಾಗಿರುವ ಕೇರಳ ಈಗ ಮತ್ತೊಂದು ಪ್ರಸ್ತಾವ ಇಟ್ಟಿದೆ. ಕರ್ನಾಟಕದ ಮೈಸೂರು ಹಾಗೂ ಕೇರಳದ ವಯನಾಡು ಜಿಲ್ಲೆಗಳನ್ನು ಬೆಸೆಯುವ ಬಂಡೀಪುರದಲ್ಲಿ ಎಲೆವೇಟೆಡ್‌ ಹೆದ್ದಾರಿ ನಿರ್ಮಾಣ ಪ್ರಸ್ತಾಪವನ್ನು ಮತ್ತೆ ಮಂಡಿಸಿದೆ.

ಯೋಜನೆಗೆ ಆಗುವ ವೆಚ್ಚದಲ್ಲಿ ಅರ್ಧದಷ್ಟನ್ನು ಭರಿಸುವುದಾಗಿ ಹೇಳಿದೆ. ಈ ಸಂಬಂಧ ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಖಾತೆ ಸಚಿವ ಪ್ರಕಾಶ್‌ ಜಾವಡೇಕರ್‌ ಅವರಿಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಪತ್ರ ಬರೆದಿದ್ದಾರೆ. ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಕ್ಕೆ ಈ ಪ್ರಸ್ತಾವದ ಒಪ್ಪಿಗೆ ಇದೆ ಎಂದೂ ಹೇಳಿದ್ದಾರೆ.

ವನ್ಯಜೀವಿಗಳಿಗೆ ತೊಂದರೆಯಾಗಬಹುದು ಎಂಬ ಕಾರಣಕ್ಕೆ ರಾತ್ರಿ 9ರಿಂದ ಬೆಳಗ್ಗೆ 6ರವರೆಗೆ ಬಂಡೀಪುರ ಹೆದ್ದಾರಿಯನ್ನು ಬಂದ್‌ ಮಾಡಿಕೊಂಡು ಬರಲಾಗಿದೆ. ಇದರಿಂದ ಕೇರಳದ ವಯನಾಡು, ಕೋಳಿಕ್ಕೋಡ್‌ ಹಾಗೂ ಮಲ್ಲಪುರಂ ಜಿಲ್ಲೆಗಳಿಗೆ ಸಮಸ್ಯೆಯಾಗಿದೆ.

ಬಂಡೀಪುರಕ್ಕೆ ಪರಾರ‍ಯಯವಾಗಿ ಸೂಚಿಸಿರುವ ಮತ್ತೊಂದು ಹೆದ್ದಾರಿ 40 ಕಿ.ಮೀ.ನಷ್ಟುದೂರವಾಗುತ್ತದೆ. ಅದು ಕೂಡ ಮೀಸಲು ಅರಣ್ಯದಲ್ಲೇ ಹಾದು ಹೋಗುತ್ತದೆ ಎಂಬ ವಾದ ಕೇರಳದ್ದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!
CM-DCM ಬ್ರೇಕ್‌ಫಾಸ್ಟ್ ಮೀಟಿಂಗ್ ಬಳಿಕ ಸಿದ್ದರಾಮಯ್ಯ ಪುತ್ರ ಶಾಕಿಂಗ್ ಹೇಳಿಕೆ