ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ ಕಾಟ್ಜು-ಜಯಾ 'ಪ್ರೇಮಕಥೆ'

Published : Oct 14, 2016, 01:26 AM ISTUpdated : Apr 11, 2018, 12:59 PM IST
ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ ಕಾಟ್ಜು-ಜಯಾ 'ಪ್ರೇಮಕಥೆ'

ಸಾರಾಂಶ

ಆಗ ನಾನು ಯುವಕನಾಗಿದ್ದೆ, ಜಯಲಲಿತ ಕೂಡ ಸುಂದರವಾಗಿದ್ದರು. ನಾನು ಅವರ ಅಕರ್ಷಣೆಗೆ ಒಳಗಾಗಿ ಪ್ರೀತಿಯಲ್ಲಿ ಬಿದ್ದಿದೆ. ಆದರೆ ಅವರಿಗೆ ಇದು ತಿಳಿದಿರಲಿಲ್ಲ. ಜಯಲಲಿತ ಈಗಲು ಸುಂದರವಾಗಿದ್ದಾರೆ  ಅಂತ ತಮ್ಮ ಫೇಸ್ ಬುಕ್ ಖಾತೆಯಾಲ್ಲಿ ಕಾಟ್ಜು ಬರೆದುಕೊಂಡಿದ್ದರು.

ಕಳೆದ 20 ದಿನಗಳಿಂದ ಚೆನೈನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿಯುತ್ತಿರುವ ಜಯಲಲಿತ ಅವರಿಗೆ ಗಣ್ಯಾತೀಗಣ್ಯರಿಂದ ಚೇತರಿಕೆಯ ಹಾರೈಕೆಗಳು ಕೇಳಿ ಬರುತ್ತಿವೆ.

ಅದರೆ ತಲೈವಿ ಪುರುಚ್ಚಿ ಜಯಲಲಿತ ಆರೋಗ್ಯ ವಿಚಾರಿಸಿರುವ ಮಾರ್ಕಂಡೆಯಾ ಕಾಟ್ಜು ತಮ್ಮ ಬಾಲ್ಯದ ಪ್ರೀತಿಯ ಬಗೆಗೆ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ಆಗ ನಾನು ಯುವಕನಾಗಿದ್ದೆ, ಜಯಲಲಿತ ಕೂಡ ಸುಂದರವಾಗಿದ್ದರು. ನಾನು ಅವರ ಅಕರ್ಷಣೆಗೆ ಒಳಗಾಗಿ ಪ್ರೀತಿಯಲ್ಲಿ ಬಿದ್ದಿದೆ. ಆದರೆ ಅವರಿಗೆ ಇದು ತಿಳಿದಿರಲಿಲ್ಲ. ಜಯಲಲಿತ ಈಗಲು ಸುಂದರವಾಗಿದ್ದಾರೆ  ಅಂತ ತಮ್ಮ ಫೇಸ್ ಬುಕ್ ಖಾತೆಯಾಲ್ಲಿ ಕಾಟ್ಜು ಬರೆದುಕೊಂಡಿದ್ದರು.

ಅಲ್ಲದೆ ಅವರು ಬೇಗ ಗುಣಮುಖರಾಗಿ ಕೆಲಸಕ್ಕೆ ಬರುತ್ತಾರೆ ಅವರು ಸಿಂಹದ ತರಹ ಅವರ ಬಳಿಯಿರುವರೆಲ್ಲ ಲಂಗೂರ್ ಗಳು  ಅಂತ ಕೂಡ ಹಾಕಿದ್ದಾರೆ.  ಅದರೆ ಅದೇನಾಯ್ತೋ ಗೋತ್ತಿಲ್ಲಾ ಉಲ್ಟಾ ಹೊಡೆದಿರೊ ಕಾಟ್ಜು ಆ ಪೋಸ್ಟ್ ನ ತಮ್ಮ ಖಾತೆಯಿಂದ ಡಿಲೀಟ್ ಮಾಡಿದ್ದಾರೆ.

ಅಲ್ದೆ ತಮ್ಮ ಹೇಳಿಕೆಯನ್ನು ತಾವೇ ಅದೊಂದು ಜೋಕ್ ಎಂದು ಮತ್ತೊಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಜೋಕ್ ಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ  ಬಿಹಾರಿಗಳಿಗಿಂತ ತಮಿಳರು ಸ್ಮಾರ್ಟ್ ಅಂದುಕೊಂಡಿದ್ದೆ ಅದರೆ ಅದನ್ನು ಸರಿಪಡಿಸಿ ಕೊಳ್ಳುತ್ತೇನೆ ಎಂದು ವಿವಾದಾತ್ಮಕವಾಗಿ ಹೇಳಿಕೊಂಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!