ರಕ್ಷಣಾ ಸಚಿವ ಸ್ಥಾನ ಬಿಡಲು ಕಾಶ್ಮೀರ ಒತ್ತಡ ಕಾರಣ: ಪರ್ರಿಕರ್

By Suvarna Web DeskFirst Published Apr 15, 2017, 9:08 AM IST
Highlights

ದೆಹಲಿ ನನ್ನ ಕಾರ್ಯಕ್ಷೇತ್ರ  ಆಗಿರಲಿಲ್ಲ, ರಕ್ಷಣಾ ಸಚಿವನಾಗಿದ್ದ ವೇಳೆ, ಕಾಶ್ಮೀರ ವಿಷಯದಲ್ಲಿ ಒತ್ತಡಕ್ಕೆ ಒಳಗಾಗಿದ್ದೆ. ಹೀಗಾಗಿ ಗೋವಾಕ್ಕೆ ಮರಳಿದೆ

ಪಣಜಿ: ತಾವು ರಕ್ಷಣಾ ಸಚಿವ ಸ್ಥಾನ ತ್ಯಜಿಸುವುದಕ್ಕೆ ಕಾಶ್ಮೀರದ ಒತ್ತಡ ಕೂಡಾ ಕಾರಣಗಳಲ್ಲಿ ಒಂದು ಎಂದು ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಹೇಳಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರ್ರಿಕರ್, ದೆಹಲಿ ನನ್ನ ಕಾರ್ಯಕ್ಷೇತ್ರ  ಆಗಿರಲಿಲ್ಲ, ರಕ್ಷಣಾ ಸಚಿವನಾಗಿದ್ದ ವೇಳೆ, ಕಾಶ್ಮೀರ ವಿಷಯದಲ್ಲಿ ಒತ್ತಡಕ್ಕೆ ಒಳಗಾಗಿದ್ದೆ. ಹೀಗಾಗಿ ಗೋವಾಕ್ಕೆ ಮರಳಿದೆ. ಕಾಶ್ಮೀರ ವಿಷಯವನ್ನು ಬಗೆಹರಿಸಲು ದೀರ್ಘಕಾಲೀನ ಯೋಜನೆಗಳು ಬೇಕು ಎಂದು ಹೇಳಿದ್ದಾರೆ.

click me!