
ಲಖನೌ: ಗಣ್ಯರ ಜನ್ಮದಿನ, ಪುಣ್ಯತಿಥಿಗೆ ಶಾಲೆಗಳಿಗೆ ರಜೆ ನೀಡುವುದನ್ನು ರದ್ದುಗೊಳಿಸು ವುದಾಗಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.
ಶಾಲೆಗಳಿಗೆ ರಜೆ ನೀಡುವ ಸಂಪ್ರದಾಯ ನಿಲ್ಲಬೇಕು. ಅದಕ್ಕೆ ಬದಲಾಗಿ ಈ ದಿನಗಳಂದು ಶಾಲೆ ತೆರೆದಿದ್ದು, ಶ್ರೇಷ್ಠ ವ್ಯಕ್ತಿಗಳ ಕುರಿತು ವಿಶೇಷ ಕಾರ್ಯಕ್ರಮ ಆಯೋಜಿಸಬೇಕು ಎಂದು ಸಿಎಂ ಹೇಳಿದ್ದಾರೆ.
ತುಂಬಾ ರಜಾ ದಿನಗಳಿರುವುದರಿಂದ ಶಾಲೆಗಳು 120 ದಿನಗಳು ಮಾತ್ರ ತೆರೆದಿರುತ್ತವೆ. ಆದರೆ ಶಾಲೆಗಳು ಕನಿಷ್ಠ 220 ದಿನಗಳು ತೆರೆದಿರಬೇಕು ಎಂದಿದ್ದಾರೆ.
ಯುಪಿ ಶಾಲೆಗಳಿಗೆ ವರ್ಷದಲ್ಲಿ 42 ಸಾರ್ವತ್ರಿಕ ರಜೆ ಇರುತ್ತದೆ. ಈ ಪೈಕಿ 17 ದಿನ ಗಣ್ಯರ ಜನ್ಮದಿನಕ್ಕೆ ಸಂಬಂಧಿಸಿದ್ದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.