
ಬೆಂಗಳೂರು (ಜು.19): ವಿಶ್ವಾಸ ಮತ ಯಾಚನೆ ಕಲಾಪದಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಮಾತು ಮುಗಿಸುತ್ತಿದ್ದಂತೆ, ಆಪರೇಷನ್ ಕಮಲ ಭಾರೀ ಸದ್ದು ಮಾಡಿದೆ.
ಶಾಸಕರಿಗೆ ಬಿಜೆಪಿ ಹಣದ ಆಮಿಷವೊಡ್ಡುತ್ತಿದೆ ಎಂಬ ಆಡಳಿತ ಪಕ್ಷದ ಶಾಸಕರ ಆರೋಪವು, ಬಿಜೆಪಿ ನಾಯಕರನ್ನು ಕೆರಳಿಸಿತು. ಇದು ಆಡಳಿತ ಪಕ್ಷ ಮತ್ತು ವಿಪಕ್ಷ ಶಾಸಕರ ನಡುವೆ ವಾಗ್ಯುದ್ಧಕ್ಕೆ ದಾರಿ ಮಾಡಿಕೊಟ್ಟಿತು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಸ್ಪೀಕರ್, ಇಂದಿನ ರಾಜಕೀಯದ ಬಗ್ಗೆ ಬೇಸರ, ಆಕ್ರೋಶ ಹೊರಹಾಕಿದರು. ತಮ್ಮ ವಿರುದ್ಧ ಆರೋಪ ಮಾಡುತ್ತಿರುವವರ ವಿರುದ್ಧ ಗುಡುಗಿದರು.
ಇದನ್ನೂ ಓದಿ | ಸದನದಲ್ಲಿ ಸಿಎಂ ಭಾಷಣ: ವಿದಾಯವೋ? ವಿಶ್ವಾಸವೋ?
‘ನಾನು ಪ್ರತಿಕ್ಷಣವೂ ಬೆಂಕಿ ಮೇಲೆ ಕೂತಿದ್ದೇನೆ, ಜವಾಬ್ದಾರಿ ಸ್ಥಾನದಲ್ಲಿರುವವರೇ ನನ್ನ ವಿರುದ್ಧ ಬಾಯಿಗೆ ಬಂದಂತೆ ಮಾಡ್ತಾರೆ. ಇವರು ಹೊಟ್ಟೆಗೆ ಏನು ತಿಂತಾರೆ?, ನಾನು ವಾಸವಿರುವ ಮನೆಗೆ ಬಂದು ನೋಡಿ. ಸೆಕ್ಯೂರಿಟಿ ಹಾಕಿಸಿಕೊಳ್ಳಲ್ಲ, ಸರ್ಕಾರಿ ಬೋರ್ಡ್ ಹಾಕಿಲ್ಲ, ಕಾರಿನ ಮೇಲೆ ಗೂಟ ಹಾಕಿಸಿಲ್ಲ, ನಿಮ್ಮ ಹೊಲಸಿಗೆ, ವ್ಯಾಪಾರಕ್ಕೆ, ಸ್ವಾರ್ಥಕ್ಕೆ, ದರಿದ್ರತನಕ್ಕೆ, ಗೌರವದಿಂದ ಬದುಕುವವರನ್ನು ಸಾಯಿಸಕ್ಕೆ ಹೋಗ್ತೀರಲ್ಲಾ? ಪ್ರಾಮಾಣಿಕರಾಗಿರುವವರು ಎಲ್ಲಿ ಹೋಗಿ ಸಾಯ್ಬೇಕು? ಏನೆಲ್ಲಾ ಇದೆಯೋ, ಅದೆಲ್ಲಾ ಹೊರಬರಲಿ, ನಾನು ಯಾವುದನ್ನೂ ತಡೆಯಲ್ಲ, ಎಲ್ಲಾ ಕೊಳಕು ಹೊರ ಬರಲಿ, ಎಂದು ಗುಡುಗಿದರು.
ಶಾಸಕರಿಗೆ ಆಮಿಷವೊಡ್ಡುವ ವಿಚಾರವಾಗಿ ಕೇಸು ದಾಖಲಾಗಬೇಕು, ಎಂದು ಆಕ್ರೋಶ ಹೊರಹಾಕಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.