ಸಿಎಂ ಆಗಿ ಎಂದ ಜೆಡಿಎಸ್‌, ಆಗೋದಿಲ್ಲ ಎಂದ ಸಿದ್ದು?

By Web DeskFirst Published Jul 21, 2019, 3:34 PM IST
Highlights

ಸಿಎಂ ಆಗಿ ಎಂದ ಜೆಡಿಎಸ್‌, ಆಗೋದಿಲ್ಲ ಎಂದ ಸಿದ್ದು?| ಮೈತ್ರಿ ಸರ್ಕಾರ ಉಳಿಸಲು ಕಸರತ್ತು

ಬೆಂಗಳೂರು[ಜು.21]: ಮೈತ್ರಿ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನದ ಭಾಗವಾಗಿ ಜೆಡಿಎಸ್‌ ನಾಯಕತ್ವವು ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್‌ಗೆ ಬಿಟ್ಟುಕೊಡುವ ಪ್ರಸ್ತಾವನೆಯನ್ನು ಮತ್ತೊಮ್ಮೆ ಮುಂದಿಟ್ಟಿತ್ತು ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದ ಜೆಡಿಎಸ್‌ ನಾಯಕರು, ಸರ್ಕಾರ ಉಳಿಯುವುದಾದರೇ ಮುಖ್ಯಮಂತ್ರಿ ಹುದ್ದೆ ಬದಲಾವಣೆಗೆ ನಾವು ಈಗಲೂ ಸಿದ್ಧ. ಅತೃಪ್ತ ಶಾಸಕರು ಹಿಂತಿರುಗಲು ಒಪ್ಪಿದರೆ ಅಥವಾ ಅವರು ಬಯಸಿದರೆ ನೀವೇ (ಸಿದ್ದರಾಮಯ್ಯ) ಮುಖ್ಯಮಂತ್ರಿ ಹುದ್ದೆಯನ್ನು ವಹಿಸಿಕೊಳ್ಳಬಹುದು ಎಂಬ ಸಲಹೆ ನೀಡಿದರು ಎನ್ನಲಾಗಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆದರೆ, ಈ ಪ್ರಸ್ತಾವನೆಯನ್ನು ಸಿದ್ದರಾಮಯ್ಯ ನಿರಾಕರಿಸಿದ್ದು, ಈ ಹಂತದಲ್ಲಿ ಮುಖ್ಯಮಂತ್ರಿ ಹುದ್ದೆ ಬದಲಾವಣೆಯ ವಿಚಾರವೇ ಬೇಡ. ಸರ್ಕಾರವನ್ನು ಉಳಿಸಿಕೊಳ್ಳಲು ಸಾಧ್ಯವಿರುವ ಎಲ್ಲಾ ಪ್ರಯತ್ನ ನಡೆಸುವತ್ತ ಗಮನ ಹರಿಸೋಣ ಎಂದು ತಿಳಿಸಿದರು ಎನ್ನಲಾಗಿದೆ.

click me!