
ಹುಬ್ಬಳ್ಳಿ : ನನ್ನ ಬಳಿ ಹಣ ಇದ್ದರೆ ಶೋಭಕ್ಕನ ಬ್ಯಾಗ್ನಲ್ಲಿ ಇಟ್ಟು ಕಳುಹಿಸುತ್ತೇನೆ! ಡಿ.ಕೆ.ಶಿವಕುಮಾರ್ ಚುನಾವಣಾ ಅಕ್ರಮ ಮಾಡುತ್ತಿದ್ದಾರೆ, ಗೋಣಿ ಚೀಲದಲ್ಲಿ ಹಣ ತಂದಿದ್ದಾರೆ. ಅವರ ಕಾರಿನ ಟೈರ್ನಲ್ಲಿ ಹಣವಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಆರೋಪಕ್ಕೆ ಸಚಿವ ತಿರುಗೇಟು ನೀಡಿದ್ದು ಹೀಗೆ. ನನ್ನ ಕಾರಿನ ಟೈರ್ನಲ್ಲಿ ಹಣ ಇದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿ ದ್ದಾರೆ.
ಹಾಗೊಂದು ವೇಳೆ ಇದ್ದರೆ ಅವರೇ ಬಂದು ನನ್ನ ಕಾರಿನಲ್ಲಿ ಕೂರಲಿ ಎಂದು ವ್ಯಂಗ್ಯವಾಡಿದರು. ಜತೆಗೆ, ನಾನು ಗೋಣಿ ಚೀಲದಲ್ಲಿ ಹಣ ತಂದಿದ್ದೇನೆ ಎಂಬ ಅನುಮಾನವಿದ್ದರೆ ಅದನ್ನು ಶೋಭಾ ಕರಂದ್ಲಾಜೆ ಅವರ ಬ್ಯಾಗ್ನಲ್ಲಿ ಇಟ್ಟು ಕಳುಹಿಸುತ್ತೇನೆ ಎಂದು ಲೇವಡಿ ಮಾಡಿದರು.
ಬೇಡ ಅಂದರವರ್ಯಾರು: ಮೈತ್ರಿ ಸರ್ಕಾರ ಬಂದಾಗಿಂದ ಬಿಜೆಪಿಗರು ಸರ್ಕಾರ ಬೀಳುತ್ತೆ, ಬಿಜೆಪಿ ಮತ್ತೆ ಅಧಿಕಾರದ ಗದ್ದುಗೆ ಏರುತ್ತದೆ ಎಂದು ಹೇಳುತ್ತಲಿದ್ದಾರೆ. ಬೇಡ ಎಂದವರಾರು ಎಂದೂ ತಿರುಗೇಟು ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.