ಮುಗಿದ ಚಳಿಗಾಲದ ಅಧಿವೇಶನ:ಬಾರದ ಶಾಸಕರು,ಚರ್ಚೆಗಿಂತ ಗಲಾಟೆಯೇ ಹೆಚ್ಚು

Published : Nov 24, 2017, 10:02 PM ISTUpdated : Apr 11, 2018, 12:48 PM IST
ಮುಗಿದ ಚಳಿಗಾಲದ ಅಧಿವೇಶನ:ಬಾರದ ಶಾಸಕರು,ಚರ್ಚೆಗಿಂತ ಗಲಾಟೆಯೇ ಹೆಚ್ಚು

ಸಾರಾಂಶ

ಇವತ್ತು ಕಲಾಪ ಶುರುವಾಗ್ತಿದಂತೆ ಧಾರವಾಡ ಜಿ.ಪಂ ಸದಸ್ಯ ಯೋಗೀಶ್​ಗೌಡ ಹತ್ಯೆ ಪ್ರಕರಣದಲ್ಲಿ ಸಚಿವರ ಪಾತ್ರವಿದೆ ಅಂತ ಆರೋಪಿಸಿ ಬಿಜೆಪಿ ಸದಸ್ಯರು ಚರ್ಚೆಗೆ ಅವಕಾಶ ಕೋರಿದರು. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆಯೂ ಚರ್ಚೆಗೆ ಅವಕಾಶ ಕೊಡಬೇಕು ಅಂತ ಪಟ್ಟು ಹಿಡಿದರು

ಬೆಳಗಾವಿಯಲ್ಲಿ 10 ದಿನಗಳ ಅಧಿವೇಶನ ನಡೀತು. ಆದ್ರೆ ಚರ್ಚೆ ಆಗಿದ್ದೆಷ್ಟು.. ಗಲಾಟೆ ನಡೆದಿದ್ದೆಷ್ಟು ಅಂತಾ ನೋಡಿದ್ರೆ ಗಲಾಟೆಯೇ ಅಧಿವೇಶವನ್ನು ನುಂಗಿ ಹಾಕಿದೆ. ಪ್ರತಿಪಕ್ಷ ಬಿಜೆಪಿ ಧರಣಿಯೊಂದಿಗೆ ಕೊನೆಯ ದಿನದ ವಿಧಾನಸಭಾ ಕಲಾಪ ಬಲಿಯಾಗುವುದರೊಂದಿಗೆ ಚಳಿಗಾಲದ ಅಧಿವೇಶನಕ್ಕೆ ತೆರೆಬಿದ್ದಿದೆ.

10 ದಿನಗಳ ಬೆಳಗಾವಿ ಅಧಿವೇಶನ ಅಂತ್ಯ

ಹತ್ತು ಹಲವು ನಿರೀಕ್ಷೆಗಳೊಂದಿಗೆ ಶುರುವಾಗಿದ್ದ ಬೆಳಗಾವಿ ಅಧಿವೇಶನ ಅಂತ್ಯವಾಗಿದೆ. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ರಾಜಕೀಯ ಮತ್ತು ಆಡಳಿತಾತ್ಮಕ ಪರಿಹಾರದ ಸಂದೇಶ ರವಾನೆಯಾಗಲಿದೆ ಅನ್ನೋ ನಿರೀಕ್ಷೆ ಹುಸಿಯಾಗಿದೆ. ಖಾಲಿ ಖಾಲಿ ಕುರ್ಚಿಗಳೊಂದಿಗೆ ಶುರುವಾದ ಅಧಿವೇಶನ ಖಾಲಿ ಖಾಲಿ ಕುರ್ಚಿಗಳ ಜೊತೆ ಗದ್ದಲದಲ್ಲೇ ಅಂತ್ಯವಾಗಿದೆ.

ಇವತ್ತು ಕಲಾಪ ಶುರುವಾಗ್ತಿದಂತೆ ಧಾರವಾಡ ಜಿ.ಪಂ ಸದಸ್ಯ ಯೋಗೀಶ್​ಗೌಡ ಹತ್ಯೆ ಪ್ರಕರಣದಲ್ಲಿ ಸಚಿವರ ಪಾತ್ರವಿದೆ ಅಂತ ಆರೋಪಿಸಿ ಬಿಜೆಪಿ ಸದಸ್ಯರು ಚರ್ಚೆಗೆ ಅವಕಾಶ ಕೋರಿದರು. ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆಯೂ ಚರ್ಚೆಗೆ ಅವಕಾಶ ಕೊಡಬೇಕು ಅಂತ ಪಟ್ಟು ಹಿಡಿದರು. ಇದಕ್ಕೆ ಅವಕಾಶ ಕೊಡಲು ಸ್ಪೀಕರ್ ನಿರಾಕರಿಸಿದರು. ಇದರಿಂದ ಸದನದಲ್ಲಿ ಗದ್ದಲ ಉಂಟಾಯಿತು.

ಈ ಮಧ್ಯೆ ಜೆಡಿಎಸ್ ಸದಸ್ಯರು ನೈಸ್ ವರದಿ ಬಗ್ಗೆ ಸರಕಾರ ಉತ್ತರ ಕೊಡಬೇಕು ಮತ್ತು ಇಂಧನ ಖರೀದಿ ಕುರಿತು ಸದನ ಸಮಿತಿ ಕೊಟ್ಟ ವರದಿಯ ಮೇಲೆ ಚರ್ಚೆ ನಡೆಸಲು ಅವಕಾಶ ಕೊಡಬೇಕು ಅಂತ ಒತ್ತಾಯಿಸಿದರು. ಎರಡು ಬಾರಿ 10 ನಿಮಿಷಗಳ ಕಾಲ ಕಲಾಪ ಮುಂದೂಡಿದರೂ ಸದನದಲ್ಲಿ ವಿಪಕ್ಷಗಳ ಪ್ರತಿಭಟನೆ ನಿಲ್ಲಲಿಲ್ಲ.  ಕೊನೆಗೆ ಅನಿವಾರ್ಯವಾಗಿ ಕಲಾಪವನ್ನು ಅನಿರ್ದಿಷ್ಟಾವಧಿ ಕಾಲ ಮುಂದೂಡುವ ನಿರ್ಧಾರವನ್ನ ಸ್ಪೀಕರ್ ಕೈಗೊಂಡರು.

40 ಗಂಟೆ 45 ನಿಮಿಷಗಳ ಕಾಲ ನಡೆದ ವಿಧಾನಸಭಾ ಕಲಾಪ

5 ಗಂಟೆ 47 ನಿಮಿಷಗಳ ಕಾಲ ಮಾತ್ರ ಉತ್ತರಕರ್ನಾಟಕ ಸಮಸ್ಯೆ ಚರ್ಚೆ

ಉತ್ತರಕರ್ನಾಟಕ ಸಮಸ್ಯೆಗಳ ಚರ್ಚೆಯಲ್ಲಿ  4 ಮಂದಿ ಶಾಸಕರು ಭಾಗಿ

ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ತಿದ್ದುಪಡಿ ವಿಧೇಯಕ ಅಂಗೀಕಾರ

11 ವಿಧೇಯಕಗಳು ಈ ಬಾರಿಯ ಅಧಿವೇಶನದಲ್ಲಿ ಅಂಗೀಕಾರ

ವಿದ್ಯುತ್ ಖರೀದಿ ಅವ್ಯವಹಾರದ ಕುರಿತು ಸದನ ಸಮಿತಿಯಿಂದ ವರದಿ ಮಂಡನೆ

ಕೆರೆ ಒತ್ತುವರಿ ಕುರಿತ ಸದನ ಸಮಿತಿಯಿಂದ ವರದಿ ಸಲ್ಲಿಕೆ

135 ಪ್ರಶ್ನೆಗಳ ಪೈಕಿ 133 ಕ್ಕೆ ಸರ್ಕಾರದಿಂದ ಉತ್ತರ

ಒಟ್ಟಿನಲ್ಲಿ, ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತೆ ಅನ್ನೋ ನಿರೀಕ್ಷೆ ಬೆಳಗಾವಿ ಅಧಿವೇಶನದಲ್ಲಿ ಹುಸಿಯಾಯ್ತು. ರಾಜಕೀಯ ವಿಚಾರಗಳೇ ಇಡೀ ಅಧಿವೇಶನವನ್ನು ನುಂಗಿ ಹಾಕ್ತು. ಸುವರ್ಣಸೌಧದಲ್ಲಿ ಚರ್ಚೆಯಾಗಿ ನಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತೆ ಅನ್ನೋ ಉತ್ತರ ಕರ್ನಾಟಕದವರ ಆಸೆಗೆ ತಣ್ಣೀರು ಎರಚಿದಂತೆ ಆಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ, ಹಳೇ ದ್ವೇಷಕ್ಕೆ ತಂದೆ ಬಲಿಪಶು, ಕಣ್ಣೀರಿಟ್ಟ ಉನ್ನಾವೋ ಕೇಸ್ ಆರೋಪಿ ಪುತ್ರಿ
ಬೆಂಗಳೂರಿನ ಪಿಜಿ ಕಟ್ಟದಲ್ಲಿ ಸಿಲಿಂಡರ್ ಸ್ಫೋಟ, ಎಂಜಿನೀಯರ್ ಸಾವು, ಮೂವರಿಗೆ ಗಾಯ