ಹೊಸ ವರ್ಷದಂದೇ ಸರ್ಕಾರದಿಂದ ಬೆಲೆ ಏರಿಕೆ ಬಿಸಿ

Published : Jan 02, 2019, 11:14 AM IST
ಹೊಸ ವರ್ಷದಂದೇ ಸರ್ಕಾರದಿಂದ ಬೆಲೆ ಏರಿಕೆ ಬಿಸಿ

ಸಾರಾಂಶ

ಹೊಸ ವರ್ಷದಂದೇ ಸರ್ಕಾರ ಸಾರ್ವಜನಿಕರಿಗೆ ಶಾಕ್ ನೀಡಿದೆ. ಅಟಲ್‌ ಜೀ ಜನಸ್ನೇಹಿ ಕೇಂದ್ರಗಳಲ್ಲಿ ವಿವಿಧ ಪ್ರಮಾಣ ಪತ್ರ, ಪಹಣಿ ಪತ್ರ, ಪಿಂಚಣಿ ಮಂಜೂರಾತಿ ಸೇರಿದಂತೆ 52 ಸೇವೆಗಳಿಗೆ ವಿಧಿಸಿದ್ದ ಶುಲ್ಕವನ್ನುಏರಿಕೆ ಮಾಡಿದೆ. 

ಬೆಂಗಳೂರು : ಅಟಲ್‌ ಜೀ ಜನಸ್ನೇಹಿ ಕೇಂದ್ರಗಳಲ್ಲಿ ವಿವಿಧ ಪ್ರಮಾಣ ಪತ್ರ, ಪಹಣಿ ಪತ್ರ, ಪಿಂಚಣಿ ಮಂಜೂರಾತಿ ಸೇರಿದಂತೆ 52 ಸೇವೆಗಳಿಗೆ ವಿಧಿಸಿದ್ದ ಶುಲ್ಕವನ್ನು ಜನವರಿ 1ರಿಂದ ಹೆಚ್ಚಿಸಿ ಕಂದಾಯ ಇಲಾಖೆ ಆದೇಶಿಸಿದೆ.

ವಿವಿಧ ಪ್ರಮಾಣ ಪತ್ರಗಳ ಸೇವೆಗೆ ನಿಗದಿಪಡಿಸಿದ್ದ 15 ರು. ಶುಲ್ಕವನ್ನು 25 ರು.ಗಳಿಗೆ, ಪಹಣಿ ಪತ್ರದ ಶುಲ್ಕವನ್ನು 10 ರು.ನಿಂದ 15 ರು.ಗೆ (ಮೊದಲ ನಾಲ್ಕು ಪುಟಗಳ ಪಹಣಿಗೆ 15 ರು. ಹಾಗೂ 5ನೇ ಪುಟದ ನಂತರ ಪ್ರತಿ ಪುಟಕ್ಕೆ 2 ರು. ನಂತೆ ಹೆಚ್ಚಳ) ಜಾಸ್ತಿ ಮಾಡಲಾಗಿದೆ.

ಸ್ಪೀಡ್‌ ಪೋಸ್ಟ್‌ನಲ್ಲಿ ಲಭ್ಯ:  ಯಾವುದೇ ನಾಗರಿಕರು ಸ್ವ-ಇಚ್ಛೆಯಿಂದ ಪ್ರಮಾಣ ಪತ್ರವನ್ನು ಅಂಚೆ ಅಥವಾ ಸ್ಪೀಡ್‌ ಪೋಸ್ಟ್‌ ಮೂಲಕ ಪಡೆಯಲು ಇಚ್ಛಿಸಿದರೆ ಅಂತಹ ಸೇವೆಗಳಿಗೂ ಸಹ ದರ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ.

2006ರಿಂದ ಆರಂಭಗೊಂಡ ಈ ಸೇವೆಗಳ ಶುಲ್ಕವನ್ನು ಈವರೆಗೆ ಹೆಚ್ಚಿಸಿರುವುದಿಲ್ಲ. ಪ್ರಸ್ತುತ ಬಳಕೆದಾರರ ಶುಲ್ಕವನ್ನು ಆಧರಿಸಿ ಬರುವ ವಾರ್ಷಿಕ ಆದಾಯವು ಅಟಲ್‌ಜೀ ಜನಸ್ನೇಹಿ ಕೇಂದ್ರ ಮತ್ತು ಭೂಮಿ ಯೋಜನೆಯ ವ್ಯವಸ್ಥೆಯನ್ನು ನಡೆಸಲು ತಗಲುವ ವಾರ್ಷಿಕ ವೆಚ್ಚಕ್ಕಿಂತ ಕಡಿಮೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ದರ ಹೆಚ್ಚಳಕ್ಕೆ ನಿರ್ಣಯ ಕೈಗೊಳ್ಳಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ ಸಿದ್ದರಾಮಯ್ಯರಿಂದ ರಾಜ್ಯದ ದಲಿತರ ಸರ್ವನಾಶ: ಮಾಜಿ ಸಂಸದ ಪ್ರತಾಪ್ ಸಿಂಹ
Karnataka News Live:4 ವರ್ಷಗಳ ಬಳಿಕ ಕೊನೆಗೂ ಜಿಪಂ, ತಾಪಂಗಳಿಗೆ ಏಪ್ರಿಲಲ್ಲಿ ಎಲೆಕ್ಷನ್