
ಬೆಂಗಳೂರು[ಜು.25] ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಟೆನ್ಷನ್ ಕಡಿಮೆಯಾಗಿದೆ. ಜುಲೈ ತಿಂಗಳಿನಲ್ಲೇ ದಾಖಲೆ ಪ್ರಮಾಣದ ನೀರು ತಮಿಳುನಾಡಿಗೆ ಹರಿದಿದೆ. ಇಲ್ಲಿಯತನಕ ಬರೋಬ್ಬರಿ 101 ಟಿಎಂಸಿ ನೀರನ್ನು ತಮಿಳುನಾಡಿಗೆ ಹರಿಸಲಾಗಿದೆ.
ಜೂನ್, ಜುಲೈ ತಿಂಗಳಲ್ಲಿ ರಾಜ್ಯ ನೀಡಬೇಕಿದ್ದ 41 ಟಿಎಂಸಿ ಮತ್ತು ಆಗಸ್ಟ್ ಗೆ ಬಿಡಬೇಕಾಗಿದ್ದ 46 ಟಿಎಂಸಿ ನೀರನ್ನು ಈಗಾಗಲೆ ತಮಿಳುನಾಡಿಗೆ ಬಿಡಲಾಗಿದೆ. ಇನ್ನು ಸೆಪ್ಟೆಂಬರ್ ತಿಂಗಳಲ್ಲಿ ಬಿಡಬೇಕಾಗಿದ್ದ 36 ಟಿಎಂಸಿ ಲೆಕ್ಕದಲ್ಲಿ ಈಗಾಗಲೇ 16 ಟಿಎಂಸಿ ತಮಿಳುನಾಡಿಗೆ ಹರಿದಿದೆ.ಇನ್ನು ನಾಲ್ಕು ದಿನದಲ್ಲೇ ಸೆಪ್ಟೆಂಬರ್ ತಿಂಗಳ ನೀರನ್ನೂ ತಮಿಳುನಾಡಿಗೆ ಹರಿಯಲಿದೆ.
ಕಾವೇರಿ ನ್ಯಾಯಾಧೀಕರಣ, ಕೇಂದ್ರದ ಈ ನಿರ್ಧಾರ ರಾಜ್ಯಕ್ಕೆ ಮರಣ ಶಾಸನ
ಪ್ರತಿನಿತ್ಯ 75000 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಯುತ್ತಿದೆ. ಇನ್ನೊಂದು ಕಡೆ ಕಾವೇರಿ ನೀರು ಹರಿವಿನಿಂದ ತಮಿಳುನಾಡು ರೈತರು ಕಂಗಾಲಾಗಿದ್ದಾರೆ. ಐದು ವರ್ಷದ ನಂತರ ಮೆಟ್ಟೂರು ಡ್ಯಾಂ ಭರ್ತಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.